ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್ತಿನ ವತಿಯಿಂದ ಇದೇ 8 ರಂದು ಪರಿಸರ ರಕ್ಷಣೆಯ‘ವೃಂದಾವನ’ ಯೋಜನೆ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದೊಡ್ಡ ಬಳ್ಳಾಪುರದ ಘಾಟಿಸುಬ್ರಹ್ಮಣ್ಯ ದೇವಸ್ಥಾನ ಹತ್ತಿರದ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ವೃಂದಾವನ ಯೋಜನೆಯಡಿಯಲ್ಲಿ 20 ಎಕರೆ ಜಾಗದಲ್ಲಿ 1,000 ಗಿಡಗಳನ್ನು ನೆಡಲಾಗುವುದು.
ಆಸಕ್ತರು ಯೋಜನೆಯೊಂದಿಗೆ ಕೈಜೋಡಿಸಲು ₹1,000 ನೀಡಿ ಹೆಸರು ನೊಂದಾಯಿಸಿಕೊಳ್ಳಬಹುದು. ಅವರ ಹೆಸರಲ್ಲಿ 2 ಗಿಡಗಳನ್ನು ನೆಟ್ಟು ಪೋಷಿಸಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9902476719/ 9448240610
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.