ADVERTISEMENT

ಲಿಫ್ಟ್‌ ಕುಸಿದು ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 20:38 IST
Last Updated 30 ಡಿಸೆಂಬರ್ 2020, 20:38 IST
ಇಂದ್ರಜಿತ್ ಕುಮಾರ್
ಇಂದ್ರಜಿತ್ ಕುಮಾರ್   

ಬೆಂಗಳೂರು: ಚಂದ್ರಾ ಬಡಾವಣೆಯ ಅಜೀಜ್ ಸೇಠ್ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಲಿಫ್ಟ್‌ಗೆ ಸಿಲುಕಿ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಬಿಹಾರದ ಇಂದ್ರಜಿತ್ ಕುಮಾರ್ (19) ಮೃತ ಕಾರ್ಮಿಕ.

ಮನನ್ ಪ್ರಾಡಕ್ಟ್‌ ಇಂಡಿಯಾ ಎಂಬ ತಾಮ್ರದ ತಂತಿ ತಯಾರಿಸುವ ಕಾರ್ಖಾನೆಯಲ್ಲಿ ಇಂದ್ರಜಿತ್ ಹೆಲ್ಪರ್‌ ಆಗಿ ಕೆಲಸ ಮಾಡುತ್ತಿದ್ದರು.

ADVERTISEMENT

ಲಿಫ್ಟ್‌ನಲ್ಲಿನೆಲಮಹಡಿಯಿಂದ ಕಾಪರ್ ಹಾಕಿಕೊಂಡು ಮೊದಲ ಮಹಡಿಗೆ ಹೋಗಿ ವಾಪಸ್ ಬರುವಾಗ, ಲಿಫ್ಟ್ ಏಕಾಏಕಿ ಕೆಳಕ್ಕೆ ಕುಸಿದಿದೆ. ಈ ವೇಳೆ ಇಂದ್ರಜಿತ್ ತಲೆಗೆ ಕಬ್ಬಿಣದ ಗೇಟ್ ಹೊಡೆದು, ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಗೆ ಕರೆದೊಯ್ದುವಾಗ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.