ADVERTISEMENT

ಎಸ್ಸೆಸ್ಸೆಲ್ಸಿ: ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 12 ಮೇ 2018, 8:37 IST
Last Updated 12 ಮೇ 2018, 8:37 IST

ಭಾಲ್ಕಿ: ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ನೀಲಮ್ಮ ವಿ.ಪಾಟೀಲ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶುಕ್ರವಾರ ಸನ್ಮಾನಿಸಲಾಯಿತು.

ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ‘ಸತತ ಪ್ರಯತ್ನದಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಎಲ್ಲ ವಿದ್ಯಾರ್ಥಿಗಳು ಸಮಯ ಪಾಲನೆ ಮಾಡಬೇಕು. ಗುರಿ ಇಟ್ಟುಕೊಂಡು ಅದನ್ನು ಮುಟ್ಟಲು ಅಧ್ಯಯನ ಮಾಡಬೇಕು’ ಎಂದರು.

ಹರೀಶ ಗೋಪಾಲರಾವ್, ಮಲ್ಲಿಕಾರ್ಜುನ ಚಿತ್ತೇಂದ್ರ, ಶಿವಪುತ್ರ, ಶಾಂತಕುಮಾರ ಅನಿಲ್‌ಕುಮಾರ, ಮಹ್ಮದ್ ಅಹ್ಮದ್, ಪ್ರಕಾಶ ವಿಲಾಸರಾವ್, ಗಾಯತ್ರಿ ದಯಾನಂದ, ಪ್ರಗತಿ ಮಹೇಂದ್ರಕುಮಾರ, ಅಭಿಷೇಕ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಪ್ರಮುಖರಾದ ರಾಮಶೆಟ್ಟಿ ಭೂಗಶೆಟ್ಟಿ, ಪ್ರಾಚಾರ್ಯ ಮಹಾದೇವ ಲಕ್ಕಾ, ಮುಖ್ಯಶಿಕ್ಷಕ ಶಂಕರರಾವ್ ನೆಲವಾಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.