ADVERTISEMENT

ಇಂದು ನಗರದಲ್ಲಿ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 15:47 IST
Last Updated 7 ಅಕ್ಟೋಬರ್ 2022, 15:47 IST

ಬೀದರ್: ತುರ್ತು ಕಾಮಗಾರಿ ಪ್ರಯುಕ್ತ ನಗರದ ವಿವಿಧೆಡೆ ಅಕ್ಟೋಬರ್ 8 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜೆಸ್ಕಾಂನ ಬೀದರ್ ವಿಭಾಗದ 11 ಕೆ.ವಿ ಕೆ.ಎಚ್.ಬಿ, 11 ಕೆ.ವಿ ನರಸಿಂಹ ಝರಣಾ, 11 ಕೆ.ವಿ ಗುಂಪಾ, 11 ಕೆ.ವಿ. ಫೈಜಪುರ ಹಾಗೂ 11 ಕೆ.ವಿ. ಆಟೊನಗರ ಫೀಡರ್‍ಗಳ ವ್ಯಾಪ್ತಿಯ ಕೆ.ಎಚ್.ಬಿ ಕಾಲೊನಿ, ಜೈಲ್ ಕಾಲೊನಿ, ಹುಡ್ಕೊ ಕಾಲೊನಿ, ಮಂಗಲಪೇಟ್, ಗರೀಬ್ ಕಾಲೊನಿ, ಹಿಡನ್ ಕಾಲೊನಿ, ಶಹಾಪುರ ಗೇಟ್, ಪಿ.ಡಬ್ಲ್ಯೂ.ಡಿ ವಸತಿಗೃಹಗಳು, ಪಕ್ಕಲವಾಡ, ಫತ್ತೆ ದರ್ವಾಜಾ, ಕಸಾಯಿವಾಡ, ಬೆತ್ಲೆಹೆಂ ಕಾಲೊನಿ, ಕರ್ನಾಟಕ ಕಾಲೇಜು, ಝರಣಾ ನರಸಿಂಹ ಮಂದಿರ, ವಿದ್ಯಾನಗರ, ಸಾಯಿನಗರ, ವಡ್ಡರ ಕಾಲೊನಿ, ಜನತಾ ನಗರ, ಸಿ.ಎಂ.ಸಿ ಕಾಲೊನಿ, ಕೃಷಿ ಕಾಲೊನಿ, ಅಲ್ಲಮಪ್ರಭು ನಗರ, ಶಿವಾಜಿ ನಗರ, ಚಿಟ್ಟಾವಾಡಿ, ಖಾಜಿ ಕಾಲೊನಿ, ಕರ್ನಾಟಕ ಕಾಲೇಜು ಹಿಂದುಗಡೆ, ಜೇರುಸಲೇಂ ಕಾಲೊನಿ, ಚನ್ನಬಸವ ನಗರ, ಗೌಳಿವಾಡ, ಇಡಗೇರಿ, ಕೆ.ಎಸ್.ಆರ್.ಟಿ.ಸಿ ಕಾಲೊನಿ, ರಾಮಚಂದ್ರ ನಗರ, ಲುಂಬಿನಿ ನಗರ, ಜಾಬಶೆಟ್ಟಿ ಲೇಔಟ್, ಅಟೊನಗರ, ಕೆ.ಐ.ಡಿ.ಬಿ ಕಾಲೊನಿ ಹಾಗೂ ಕೆ.ಎಚ್.ಬಿ-ಅಲಿಯಾಬಾದ್ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

ಸುಬ್ಬಣ್ಣ ಕರಕನಳ್ಳಿಗೆ ಹುಡಗಿ ಪ್ರಶಸ್ತಿ

ADVERTISEMENT

ಬೀದರ್: ಯುವ ಸಾಹಿತಿ ಸುಬ್ಬಣ್ಣ ಕರಕನಳ್ಳಿ ಅವರಿಗೆ ದಿ. ದೇಶಾಂಶ ಹುಡಗಿ ಕಾವ್ಯ ಪ್ರಶಸ್ತಿ ಲಭಿಸಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ದಸರಾ ಕವಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.