ADVERTISEMENT

ಬೀದರ್‌: ಕುಂಬಾರ ಕುಟುಂಬಕ್ಕೆ ₹1.12 ಲಕ್ಷ ನೆರವು

ಚಿತ್ರಕಲಾ ಶಿಕ್ಷಕನ ಕುಟುಂಬದ ಕಷ್ಟಕ್ಕೆ ಮಿಡಿದ ಚಿತ್ರಕಲಾ ಶಿಕ್ಷಕರ ಸಂಘಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:38 IST
Last Updated 26 ಜುಲೈ 2021, 3:38 IST
ಕೋವಿಡ್‌ನಿಂದ ಮೃತಪಟ್ಟ ಚಿತ್ರಕಲಾ ಶಿಕ್ಷಕ ಅಂಜಪ್ಪ ಕುಂಬಾರ ಅವರ ಕುಟುಂಬಕ್ಕೆ ಬಸವಕಲ್ಯಾಣದಲ್ಲಿ ಶನಿವಾರ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ₹1,12,811 ನೆರವು ನೀಡಿತು
ಕೋವಿಡ್‌ನಿಂದ ಮೃತಪಟ್ಟ ಚಿತ್ರಕಲಾ ಶಿಕ್ಷಕ ಅಂಜಪ್ಪ ಕುಂಬಾರ ಅವರ ಕುಟುಂಬಕ್ಕೆ ಬಸವಕಲ್ಯಾಣದಲ್ಲಿ ಶನಿವಾರ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ₹1,12,811 ನೆರವು ನೀಡಿತು   

ಬೀದರ್‌: ಕೊರೊನಾ ಸೋಂಕಿನಿಂದ ಮೃತಪಟ್ಟ ಹುಲಸೂರಿನ ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಅಂಜಪ್ಪ ಕುಂಬಾರ ಅವರ ಕುಟುಂಬಕ್ಕೆ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ₹1,12,811 ನೆರವು ನೀಡಿದೆ.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣುಕಾಂತ ಠಾಕೂರ್ ಮನವಿ ಮೇರೆಗೆ ಚಿತ್ರಕಲಾ ಶಿಕ್ಷಕರು ಹಣ ಸಂಗ್ರಹಿಸಿ ಬಸವಕಲ್ಯಾಣದ ಬಾಡಿಗೆ ಮನೆಯಲ್ಲಿರುವ ಅಂಜಪ್ಪ ಕುಂಬಾರ ಅವರ ಪತ್ನಿ ಹಾಗೂ ಪುತ್ರನಿಗೆ ಚೆಕ್‌ ವಿತರಿಸಿದರು. ಶಿಕ್ಷಕರು ಅವರಿಗೆ ಧೈರ್ಯ ಹೇಳಿದರು.

ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣುಕಾಂತ ಠಾಕೂರ್, ಗಿಪ್ಸನ್ ಕೋಟೆ, ಆನಂದ ದೀನೆ, ಸಂತೋಷ ಹೊನ್ನಿಕೇರಿ, ಪರಮೇಶ್ವರ ಕಾಡ್ಯಳ, ಸಂಗಮ ಸಜ್ಜನ, ಸಂತೋಷ ವೀರಣ್ಣೋರ್, ಸಂತೋಷ ಪಾಟೀಲ, ಅಶೋಕ ಮರಪಳ್ಳಿ, ವೀರೇಶ ಹಗ್ಗೆ, ವಿಶ್ವನಾಥ ಸ್ವಾಮಿ, ವೆಂಕಟೇಶ ಬಿರಾದಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.