ADVERTISEMENT

ಭಾಲ್ಕಿ | ಅಕಾಲಿಕ ಮಳೆಗೆ 69.60 ಹೆಕ್ಟೇರ್ ಬೆಳೆಹಾನಿ

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:26 IST
Last Updated 20 ಮೇ 2025, 15:26 IST
<div class="paragraphs"><p>ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದ ರೈತ ಶಿವಕುಮಾರ ಡಾವರಗಾಂವೆ ಅವರ ಹೊಲಕ್ಕೆ ತೋಟಗಾರಿಕೆ ಇಲಾಖೆ ಎಡಿ ಮಾರುತಿ ಜಬನೂರ ಭೇಟಿ ನೀಡಿ ಹಾನಿಯಾಗಿರುವ ಈರುಳ್ಳಿ ವೀಕ್ಷಿಸಿದರು</p></div>

ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದ ರೈತ ಶಿವಕುಮಾರ ಡಾವರಗಾಂವೆ ಅವರ ಹೊಲಕ್ಕೆ ತೋಟಗಾರಿಕೆ ಇಲಾಖೆ ಎಡಿ ಮಾರುತಿ ಜಬನೂರ ಭೇಟಿ ನೀಡಿ ಹಾನಿಯಾಗಿರುವ ಈರುಳ್ಳಿ ವೀಕ್ಷಿಸಿದರು

   

ಭಾಲ್ಕಿ: ತಾಲ್ಲೂಕಿನಲ್ಲಿ ಅಕಾಲಿಕ ಮಳೆಗೆ ಬೆಳೆಹಾನಿ ಸಂಭವಿಸಿದ ಹೊಲಗಳಿಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಾರುತಿ ಜಬನೂರ ಭೇಟಿ ನೀಡಿ ಮಾಹಿತಿ ಪಡೆದರು.

ಖಟಕಚಿಂಚೋಳಿ ಗ್ರಾಮದ ರೈತ ಶಿವಕುಮಾರ ಡಾವರಗಾಂವೆ ಅವರ ಹೊಲಕ್ಕೆ ಮಂಗಳವಾರ ಭೇಟಿ ನೀಡಿ ಈರುಳ್ಳಿ ಬೆಳೆ ಹಾನಿಯಾಗಿರುವುದನ್ನು ವೀಕ್ಷಿಸಿದರು.

ADVERTISEMENT

ಬಳಿಕ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ತೋಟಗಾರಿಕೆಯ ವಿವಿಧ ಬೆಳೆಗಳು ಹಾನಿ ಸಂಭವಿಸಿವೆ. ಹೊಲಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದುವರೆಗೂ ಸುಮಾರು 69.60 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪಪ್ಪಾಯಿ 26.80 ಹೆಕ್ಟೇರ್ ಹಾನಿಯಾಗಿದೆ. ಉಳಿದಂತೆ ಟೊಮೆಟೊ 21.70, ಕಲ್ಲಂಗಡಿ 11.20, ಮಾವು 4.80, ಬಾಳೆ 2.20, ಸೀಬೆ 2.0, ಈರುಳ್ಳಿ 0.50, ಮೆಣಸಿನಕಾಯಿ ಮತ್ತು 0.40 ಹೆಕ್ಟೇರ್ ಬೆಳೆ ಹಾನಿಯಾಗಿದೆ. ನಮ್ಮ ಇಲಾಖೆ ಅಧಿಕಾರಿಗಳು ಖುದ್ದು ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಹಾನಿ ಆಗಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದಕ್ಕೂ ಮಿಕ್ಕಿ ಬೆಳೆಹಾನಿ ಆಗಿದ್ದು ಕಂಡು ಬಂದರೆ ರೈತರು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ಅಕಾಲಿಕ ಮಳೆಗೆ ತೋಟಗಾರಿಕೆ ಬೆಳೆಗಳು ಹಾನಿ ಆಗಿರುವ ಬಗ್ಗೆ ಸಮೀಕ್ಷೆ ನಡೆಸಲಾಗುತ್ತದೆ. ಶೀಘ್ರ ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರಕ್ಕಾಗಿ ಇಲಾಖೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ.
ಮಾರುತಿ ಜಬನೂರ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಭಾಲ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.