ADVERTISEMENT

ಮಹನೀಯರ ದೇಶ ಪ್ರೇಮದ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 13:43 IST
Last Updated 15 ಆಗಸ್ಟ್ 2021, 13:43 IST
ಬೀದರ್‌ನಲ್ಲಿ ಭಾನುವಾರ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ಎಂ.ಜಿ. ಗಂಗನಪಳ್ಳಿ ಉದ್ಘಾಟಿಸಿದರು. ಪಾಂಡುರಂಗ ಬೆಲ್ದಾರ್, ಶಿವನಾಥ ಪಾಟೀಲ, ಕಾಶಿನಾಥ ಕಾಡಾದಿ, ಸಂಜೀವಕುಮಾರ ಸ್ವಾಮಿ, ಅರವಿಂದ ಕುಲಕರ್ಣಿ. ಕೃಷ್ಣ ಕುಲಕರ್ಣಿ ಇದ್ದಾರೆ
ಬೀದರ್‌ನಲ್ಲಿ ಭಾನುವಾರ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ಎಂ.ಜಿ. ಗಂಗನಪಳ್ಳಿ ಉದ್ಘಾಟಿಸಿದರು. ಪಾಂಡುರಂಗ ಬೆಲ್ದಾರ್, ಶಿವನಾಥ ಪಾಟೀಲ, ಕಾಶಿನಾಥ ಕಾಡಾದಿ, ಸಂಜೀವಕುಮಾರ ಸ್ವಾಮಿ, ಅರವಿಂದ ಕುಲಕರ್ಣಿ. ಕೃಷ್ಣ ಕುಲಕರ್ಣಿ ಇದ್ದಾರೆ   

ಬೀದರ್‌: ‘ಸುಖದೇವ, ರಾಜಗುರು, ಭಗತಸಿಂಗ್‍ರ ದೇಶಪ್ರೇಮ ಹಾಗೂ ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳ ಬಗೆಗೆ ಇಂದಿನ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಹಿರಿಯ ಸಾಹಿತಿ ಎಂ.ಜಿ. ಗಂಗನಪಳ್ಳಿ ಹೇಳಿದರು.

ನಗರದಲ್ಲಿ ಭಾನುವಾರ ಕರ್ನಾಟಕ ಜಾಗೃತಿ ವೇದಿಕೆಯ ಜಿಲ್ಲಾ ಘಟಕ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ನ್ಯೂ ಮದರ್ ತೆರೆಸಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಕಾಶಿನಾಥ ಕಾಡಾದಿ, ಸಂಜೀವಕುಮಾರ ಸ್ವಾಮಿ ಮಾತನಾಡಿದರು.

ADVERTISEMENT

ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಮಹಾದೇವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಶಿವನಾಥ ಪಾಟೀಲ, ಕೃಷ್ಣ ಕುಲಕರ್ಣಿ ಶಿಕ್ಷಕರಾದ ಬಾಬುರಾವ್ ಮಾಳಗೆ, ನಜೀಬ್ ಹುಸೇನಿ, ಬಾಲಿಕಾ, ಸಂತೋಷಕುಮಾರ, ಶಾರದಾ, ಪ್ರವೀಣಕುಮಾರ, ಜಯಶ್ರೀ ಇದ್ದರು.

ಕೆಆರ್‌ಇ ಸಂಸ್ಥೆ:ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಎಂ.ಎಚ್.ಚೆಲುವಾ, ಬಿ.ವಿ.ಸಿಂಧೋಲ್, ವಿಜಯಕುಮಾರ ಗುನ್ನಳ್ಳಿ, ಶಿವಾನಂದ ಗಾದಗೆ, ಸತೀಶ್‌ ಪಾಟೀಲ, ಶಿವಕುಮಾರ ಶೆಟಕಾರ, ಅಭಯಕುಮಾರ ಪಾಟೀಲ, ಸಚಿನ್‌ ವಿಶ್ವಕರ್ಮ ಇದ್ದರು. ರಮಾಬಾಯಿ ಶಿಂದೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.