ADVERTISEMENT

‘ಬಸವಣ್ಣನ ತತ್ವಗಳು ಜೀವನದಲ್ಲಿ ಅಳವಡಿಸಿಕೊಳ್ಳಿ’

ಬಸವ ಸೇವಾ ಪ್ರತಿಷ್ಠಾನದಿಂದ 204ನೇ ಬಸವ ಜೋತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 12:50 IST
Last Updated 13 ಡಿಸೆಂಬರ್ 2019, 12:50 IST
ಹುಮನಾಬಾದ್‍ನ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ 204ನೇ ಬಸವ ಜೋತಿ ಕಾರ್ಯಕ್ರಮದಲ್ಲಿ ಡಾ.ಗಂಗಾಂಬಿಕೆ ಅಕ್ಕನವರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಹುಮನಾಬಾದ್‍ನ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ 204ನೇ ಬಸವ ಜೋತಿ ಕಾರ್ಯಕ್ರಮದಲ್ಲಿ ಡಾ.ಗಂಗಾಂಬಿಕೆ ಅಕ್ಕನವರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.   

ಹುಮನಾಬಾದ್: ಬಸವಣ್ಣನವರ ತತ್ವ ಆದರ್ಶ ಮತ್ತು ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂದು ಬಸವ ಸೇವಾ ಪ್ರತಿಷ್ಠಾನ ಡಾ.ಗಂಗಾಂಬಿಕೆ ಅಕ್ಕನವರು ಹೇಳಿದರು.

ಪಟ್ಟಣದ ಹೌಸಿಂಗ ಬೋರ್ಡ್ ಕಾಲೊನಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವಸೇವಾ ಪ್ರತಿಷ್ಠಾನದಿಂದ ಬುಧವಾರ ನಡೆದ 204ನೇ ಬಸವ ಜೋತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಣ್ಣ ಬಸವಣ್ಣನವರು 12ನೇ ಶತಮಾನದಲ್ಲಿ ಶಿಕ್ಷಣದಿಂದ ವಂಚಿತರಾದ ತಳಸಮುದಾಯದ ಜನರಿಗೆ ಶರಣ ತತ್ವ ಮತ್ತು ಚಿಂತನಾ ಗೋಷ್ಠಿಗಳ ಮೂಲಕ ಶಿಕ್ಷಣದ ಜ್ಞಾನ ನೀಡಿದ್ದಾರೆ ಎಂದರು.

ADVERTISEMENT

ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿ ನಮಗೆ ನೀಡಿರುವಂತಹ ಅಮೂಲ್ಯವಾದ ವಚನ ಸಾಹಿತ್ಯದ ಮೌಲ್ಯಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಬರಬೇಕು ಎಂದು ತಿಳಿಸಿದರು.

ಮಲ್ಲಿಕಾರ್ಜುನ ಸಂಗಮಕರ ಮಾತನಾಡಿ, ಜೀವನದಲ್ಲಿ ಬರುವಂತಹ ಸುಖ ಮತ್ತು ದುಃಖವನ್ನು ಪ್ರತಿಯೂಬ್ಬರು ಸಮಾನವಾಗಿ ಸ್ವೀಕರಿಸಬೇಕು. ವಚನ ಸಾಹಿತ್ಯ ಓದುವುದರ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.

ಡಾ.ಸೋಮನಾಥ ಯಳವಾರ, ಬಸವತೀರ್ಥಪ್ಪ ಮಂಠಾಳೆ, ಶರಣಪ್ಪ ಚಿಮಕೊಡ, ಡಾ.ಎಸ್.ಎಸ್.ಕಲ್ಮಠ, ಸತೀಷ ಮಂಠಾಳೆ, ಅಶೋಕ ಮಠಪತಿ, ಅಶೋಕ ತುಪ್ಪದ ಇದ್ದರು. ಮಹಾದೇವ ಹವ್ಲಾದಾರ್ ಸ್ವಾಗತಿಸಿದರು. ಬಸವರಾಜ ಚಿಮ್ಮಕೊಡ ನಿರೂಪಿಸಿದರು, ಬಸವರಾಜ ರುದ್ರವಾಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.