ADVERTISEMENT

ಸಾನಿಸಾಹೇಬ್ ಜಾತ್ರೆ: ಸಂದಲ್ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:38 IST
Last Updated 3 ಜುಲೈ 2025, 15:38 IST
ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಹಜರತ್ ಸಾನಿಸಾಹೇಬ್(ಮಡ್ಡಿ ಪೀರ್) ಜಾತ್ರೆ ನಿಮಿತ್ತ ಗುರುವಾರ ಗಂಧ(ಸಂದಲ್) ಮೆರವಣಿಗೆ ನಡೆಯಿತು
ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಹಜರತ್ ಸಾನಿಸಾಹೇಬ್(ಮಡ್ಡಿ ಪೀರ್) ಜಾತ್ರೆ ನಿಮಿತ್ತ ಗುರುವಾರ ಗಂಧ(ಸಂದಲ್) ಮೆರವಣಿಗೆ ನಡೆಯಿತು   

ಭಾಲ್ಕಿ: ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಹಜರತ್ ಸಾನಿಸಾಹೇಬ್(ಮಡ್ಡಿ ಪೀರ್) ದೇವರ ಜಾತ್ರೆಗೆ ಗುರುವಾರ ಒಂಟೆ ಮೇಲೆ ಗಂಧ(ಸಂದಲ್) ಲೇಪಿಸಿ ಮೆರವಣಿಗೆ ನಡೆಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.

ಗ್ರಾಮದ ಬಸವೇಶ್ವರ ಮಂದಿರ ಸಮೀಪದ ಪೀರ್ ಕೂಡಿಸುವ ಸ್ಥಳದಿಂದ ಆರಂಭವಾದ ಗಂಧ (ಸಂದಲ್) ಮೆರವಣಿಗೆ ಗಣೇಶ ಮಂದಿರ, ಹನುಮಾನ ಮಂದಿರ ಮಾರ್ಗದ ಮೂಲಕ ಸಾಗಿ ಹಜರತ್ ಸಾನಿಸಾಹೇಬ್(ಮಡ್ಡಿ ಪೀರ್) ದರ್ಗಾದವರೆಗೆ ನಡೆಯಿತು. 

ಸಾದಿಕ್ ಮುಜಾವರ್, ಗೌಸೋದ್ದಿನ್ ಮುಜಾವರ್, ಚಂದ್ರಕಾಂತ ಪಾಟೀಲ, ನಾಗೇಶ ಮೊರಷಾದ ಸೇರಿದಂತೆ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.