ADVERTISEMENT

ಗುರುಬಸವ ಪಟ್ಟದ್ದೇವರ ಜನ್ಮದಿನ: ವಿದ್ಯಾರ್ಥಿಗಳಿಂದ ರಕ್ತದಾನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 13:02 IST
Last Updated 9 ಆಗಸ್ಟ್ 2021, 13:02 IST
ಗುರುಬಸವ ಪಟ್ಟದ್ದೇವರ 40ನೇ ಜನ್ಮದಿನದ ಪ್ರಯುಕ್ತ ಬೀದರ್‌ನ ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು
ಗುರುಬಸವ ಪಟ್ಟದ್ದೇವರ 40ನೇ ಜನ್ಮದಿನದ ಪ್ರಯುಕ್ತ ಬೀದರ್‌ನ ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು   

ಬೀದರ್: ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರ 40ನೇ ಜನ್ಮದಿನದ ಪ್ರಯುಕ್ತ ಇಲ್ಲಿಯ ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ರಕ್ತದಾನ ಎಲ್ಲ ದಾನಗಳಲ್ಲೇ ಶ್ರೇಷ್ಠವಾಗಿದೆ. ರಕ್ತದಾನ ಜೀವ ಉಳಿಸುತ್ತದೆ. ರಕ್ತ ಕೊಟ್ಟವರ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಪ್ರೊ. ಉಮಾಕಾಂತ ಮೀಸೆ ತಿಳಿಸಿದರು.

ರಕ್ತದಾನ ಮಾಡಿದ ವ್ಯಕ್ತಿಯ ಶರೀರದಲ್ಲಿ ಮೂರು ತಿಂಗಳಲ್ಲಿ ಹೊಸ ರಕ್ತ ಬರುತ್ತದೆ. ರಕ್ತದಾನಿಗೆ ಪುಣ್ಯ ದೊರಕುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ಬಿ. ಬಿರಾದಾರ ಹೇಳಿದರು.

ADVERTISEMENT

ಗುರುಬಸವ ಪಟ್ಟದ್ದೇವರು ನೇರ ನಡೆ-ನುಡಿ ಉಳ್ಳವರಾಗಿದ್ದಾರೆ. ಚನ್ನಬಸವ ಪಟ್ಟದ್ದೇವರ ಮಾರ್ಗದಲ್ಲಿ ಸಾಗಿದ್ದಾರೆ ಎಂದು ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ನುಡಿದರು.

ರಕ್ತದಾನ ಮಾಡಿದ ಸಿದ್ಧಲಿಂಗ ಚಂದ್ರಕಾಂತ, ವಿಜಯಕುಮಾರ, ಉಮೇಶ ಶಾಮರಾವ್, ಸೂರ್ಯಕಾಂತ ಮಾರ್ಜೋಡೆ ಅವರನ್ನು ಸನ್ಮಾನಿಸಲಾಯಿತು.

ಅಪೆಕ್ಸ್ ಆಸ್ಪತ್ರೆಯ ಸೂರ್ಯಕಾಂತ ಕಾರಾಮುಂಗಿ, ಸಂತೋಷ, ಸುರೇಶ, ಬಸವರಾಜ, ಅಶೋಕ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.