ADVERTISEMENT

ಅಕ್ಕ ಅನ್ನಪೂರ್ಣ ಪ್ರವಚನ ರದ್ದು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 15:06 IST
Last Updated 12 ಆಗಸ್ಟ್ 2021, 15:06 IST

ಬೀದರ್: ಇಲ್ಲಿಯ ಶರಣ ಉದ್ಯಾನದಲ್ಲಿ ಶುಕ್ರವಾರ(ಆ.13)ದಿಂದ ನಡೆಯಲಿದ್ದ ಅಕ್ಕ ಅನ್ನಪೂರ್ಣ ಅವರ ಪ್ರವಚನವನ್ನು ರದ್ದುಪಡಿಸಲಾಗಿದೆ.
ಬಸವ ಸೇವಾ ಪ್ರತಿಷ್ಠಾನ ಟ್ರಸ್ಟ್‍ನ ಕೆಲ ಅಡೆತಡೆಗಳು ಇದ್ದು, ಅವುಗಳು ನಿವಾರಣೆ ಆಗುವವರೆಗೆ ಶರಣ ಉದ್ಯಾನದಲ್ಲಾಗಲಿ, ಬಸವಗಿರಿಯಲ್ಲಾಗಲಿ ಯಾವುದೇ ರೀತಿಯ ಕಾರ್ಯಕ್ರಮ, ಪ್ರವಚನಗಳನ್ನು ನಡೆಸದಂತೆ ಸರ್ವ ಸದಸ್ಯರಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರರಾವ್ ಹೊನ್ನಾ ತಿಳಿಸಿದ್ದಾರೆ.

* * *


ಅಂಬೇಡ್ಕರ್ ಶಾಲೆಗೆ ಉತ್ತಮ ಫಲಿತಾಂಶ

ADVERTISEMENT


ಜನವಾಡ: ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ದೀಪಕ ಶಿಕ್ಷಣ ಸಂಸ್ಥೆ ಸಂಚಾಲಿತ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಗೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ 49 ವಿದ್ಯಾರ್ಥಿಗಳ ಪೈಕಿ 30 ಅಗ್ರಶ್ರೇಣಿ ಹಾಗೂ 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯಶಿಕ್ಷಕ ಯುವರಾಜ ಬಾರೊಳೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಗೌರವಾಧ್ಯಕ್ಷ ಬಬ್ರುವಾಹನ ಬೆಳಮಗಿ, ಅಧ್ಯಕ್ಷೆ ಜ್ಯೋತಿ ಬೆಳಮಗಿ ಹಾಗೂ ಕಾರ್ಯದರ್ಶಿ ಲಾಲಛಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.