ADVERTISEMENT

ಜೆಡಿಎಸ್ ಸೇರಿದ ಕಾಂಗ್ರೆಸ್, ಬಿಜೆಪಿ ಪ್ರಮುಖರು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 16:15 IST
Last Updated 29 ಮಾರ್ಚ್ 2023, 16:15 IST
ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖರನ್ನು ಶಾಸಕ ಬಂಡೆಪ್ಪ ಕಾಶೆಂಪುರ ಪಕ್ಷದ ಧ್ವಜ ಕೊಟ್ಟು ಜಾತ್ಯತೀತ ಜನತಾ ದಳಕ್ಕೆ ಬರಮಾಡಿಕೊಂಡರು
ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖರನ್ನು ಶಾಸಕ ಬಂಡೆಪ್ಪ ಕಾಶೆಂಪುರ ಪಕ್ಷದ ಧ್ವಜ ಕೊಟ್ಟು ಜಾತ್ಯತೀತ ಜನತಾ ದಳಕ್ಕೆ ಬರಮಾಡಿಕೊಂಡರು   

ಜನವಾಡ: ಬೀದರ್ ತಾಲ್ಲೂಕಿನ ಕಮಠಾಣ, ಪಾತರಪಳ್ಳಿ, ಸಿರ್ಸಿ(ಎ), ಯದಲಾಪುರ, ರೇಕುಳಗಿ, ನಿಡವಂಚಾ, ಕಾಶೆಂಪುರ (ಸಿ) ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖರು ಜಾತ್ಯತೀತ ಜನತಾ ದಳಕ್ಕೆ ಸೇರ್ಪಡೆಯಾದರು.
ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮದಲ್ಲಿ ಪ್ರಮುಖರಾದ ಸಲಾಂ ಪಾಶಾ ರೇಕುಳಗಿ, ವಿಜಯಕುಮಾರ ಉಡಬಾಳ್, ಸತೀಶ್ ಯಾಬಾ ಕಮಠಾಣ, ಸತೀಶ್ ಪಾಟೀಲ ತಡಪಳ್ಳಿ ಮೊದಲಾದವರನ್ನು ಶಾಸಕ ಬಂಡೆಪ್ಪ ಕಾಶೆಂಪುರ ಪಕ್ಷದ ಧ್ವಜ ಕೊಟ್ಟು ಸ್ವಾಗತಿಸಿ, ಬರಮಾಡಿಕೊಂಡರು.
ಮುಖಂಡರಾದ ಮಹೇಶ ಚಿಂತಾಮಣಿ, ಗಣಪತಿ ಶಂಭು, ಶಿವಕುಮಾರ ಪಾಟೀಲ ಬಂಬಳಗಿ, ಅಭಿಲಾಶ್ ಸಿಂಧೆ ನಾಗೋರ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.