ADVERTISEMENT

‘ಹೈನುಗಾರಿಕೆಯಿಂದ ಆರ್ಥಿಕ ಸಬಲತೆ’

ಜಾನುವಾರು ಸಂಶೋಧನೆ ಕೇಂದ್ರಕ್ಕೆ ಕ್ಷೇತ್ರ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 15:16 IST
Last Updated 25 ಸೆಪ್ಟೆಂಬರ್ 2021, 15:16 IST
ಕಲಬುರ್ಗಿಯ ಮೈರಾಡಾ ಸಂಸ್ಥೆ ವತಿಯಿಂದ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಸಮೀಪದ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರ(ದೇವಣಿ)ಕ್ಕೆ ಕ್ಷೇತ್ರ ಭೇಟಿ ನೀಡಿದ ರೈತ ಮಹಿಳೆಯರಿಗೆ ಸೂಪರ್ ನೇಪಿಯರ್ ಮೇವಿನ ತುಂಡು ವಿತರಿಸಲಾಯಿತು
ಕಲಬುರ್ಗಿಯ ಮೈರಾಡಾ ಸಂಸ್ಥೆ ವತಿಯಿಂದ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಸಮೀಪದ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರ(ದೇವಣಿ)ಕ್ಕೆ ಕ್ಷೇತ್ರ ಭೇಟಿ ನೀಡಿದ ರೈತ ಮಹಿಳೆಯರಿಗೆ ಸೂಪರ್ ನೇಪಿಯರ್ ಮೇವಿನ ತುಂಡು ವಿತರಿಸಲಾಯಿತು   

ಬೀದರ್: ಕಲಬುರ್ಗಿಯ ಮೈರಾಡಾ ಸಂಸ್ಥೆ ವತಿಯಿಂದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಪ್ರಾಯೋಜಿತ ತರಬೇತಿ ಕಾರ್ಯಕ್ರಮದಡಿ 30 ರೈತ ಮಹಿಳೆಯರು ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಸಮೀಪದ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರ (ದೇವಣಿ)ಕ್ಕೆ ಕ್ಷೇತ್ರ ಭೇಟಿ ನೀಡಿದರು.

ಲಾಭದಾಯಕ ಪಶು ಪಾಲನೆ ಜಾನುವಾರು ನಿರ್ವಹಣೆ ಪದ್ಧತಿ, ಬೀದರ್‍ನಲ್ಲಿ ಇರುವ ವಿವಿಧ ರೀತಿಯ ಮೇವಿನ ಬೆಳೆಗಳ ಕುರಿತು ಮಾಹಿತಿ ಪಡೆದರು.

ರೈತರು ಕೃಷಿಯ ಜತೆಗೆ ಹೈನುಗಾರಿಕೆಯಂತಹ ಉಪಕಸುಬುಗಳನ್ನು ಕೈಗೊಂಡರೆ ಆರ್ಥಿಕವಾಗಿ ಸಬಲರಾಗಬಹುದು ಎಂದು ಕೇಂದ್ರದ ಮುಖ್ಯಸ್ಥ ಡಾ. ಪ್ರಕಾಶಕುಮಾರ ರಾಠೋಡ್ ತಿಳಿಸಿದರು.

ADVERTISEMENT

ರೈತ ಮಹಿಳೆಯರಿಗೆ ಸೂಪರ್ ನೇಪಿಯರ್ ಮೇವಿನ ತುಂಡು ಹಾಗೂ ಚೊಗಚೆ ಮೇವಿನ ಬೀಜಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.