ADVERTISEMENT

ಬದುಕಿಗೆ ಜಾನಪದ ಅತ್ಯಗತ್ಯ

ರಾಷ್ಟ್ರೀಯ ಜನಪದ ನೃತ್ಯೋತ್ಸವ: ಉಮಾಕಾಂತ ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 15:14 IST
Last Updated 25 ಸೆಪ್ಟೆಂಬರ್ 2021, 15:14 IST
ಬೀದರ್‌ನ ಕರ್ನಾಟಕ ಸಾಹಿತ್ಯ ಸಂಘದಲ್ಲಿ ರಾಷ್ಟ್ರೀಯ ಜನಪದ ನೃತ್ಯೋತ್ಸವ ಪ್ರಯುಕ್ತ ನಡೆದ ಪ್ರಬಂಧ ಮಂಡನೆ ಕಾರ್ಯಕ್ರಮಲ್ಲಿ ಆಂಗ್ಲ ಸಾಹಿತಿ ಡಾ. ಉಮಾಕಾಂತ ಪಾಟೀಲ ಮಾತನಾಡಿದರು. ಮಹಾರುದ್ರ ಡಾಕುಳಗಿ, ಪುಷ್ಪಾ ಕನಕ, ಸಾಧನಾ ರಂಜೋಳಕರ್, ಶಂಕರೆಪ್ಪ ಹೊನ್ನಾ, ಪಂಚಾಕ್ಷರಿ ಪುಣ್ಯಶೆಟ್ಟಿ, ವೈಜಿನಾಥ ಚಿಕ್ಕಬಸೆ, ಪ್ರೊ. ವಿನೋದ ಮೂಲಗೆ, ಎಸ್.ಬಿ. ಕುಚಬಾಳ ಇದ್ದರು
ಬೀದರ್‌ನ ಕರ್ನಾಟಕ ಸಾಹಿತ್ಯ ಸಂಘದಲ್ಲಿ ರಾಷ್ಟ್ರೀಯ ಜನಪದ ನೃತ್ಯೋತ್ಸವ ಪ್ರಯುಕ್ತ ನಡೆದ ಪ್ರಬಂಧ ಮಂಡನೆ ಕಾರ್ಯಕ್ರಮಲ್ಲಿ ಆಂಗ್ಲ ಸಾಹಿತಿ ಡಾ. ಉಮಾಕಾಂತ ಪಾಟೀಲ ಮಾತನಾಡಿದರು. ಮಹಾರುದ್ರ ಡಾಕುಳಗಿ, ಪುಷ್ಪಾ ಕನಕ, ಸಾಧನಾ ರಂಜೋಳಕರ್, ಶಂಕರೆಪ್ಪ ಹೊನ್ನಾ, ಪಂಚಾಕ್ಷರಿ ಪುಣ್ಯಶೆಟ್ಟಿ, ವೈಜಿನಾಥ ಚಿಕ್ಕಬಸೆ, ಪ್ರೊ. ವಿನೋದ ಮೂಲಗೆ, ಎಸ್.ಬಿ. ಕುಚಬಾಳ ಇದ್ದರು   


ಬೀದರ್: ಇಂದು ಮನುಷ್ಯ ಆಧುನಿಕತೆಗೆ ಎಷ್ಟೇ ಒಗ್ಗಿಕೊಂಡರೂ ಬದುಕಿಗೆ ಜಾನಪದ ಅತ್ಯಗತ್ಯ ಎಂದು ಆಂಗ್ಲ ಸಾಹಿತಿ ಡಾ. ಉಮಾಕಾಂತ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ದೆಹಲಿಯ ಸಂಸ್ಕೃತಿ ಸಚಿವಾಲಯ, ನಾಗಪುರದ ದಕ್ಷಿಣ ವಲಯ ಕೇಂದ್ರ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ಜನಪದ ನೃತ್ಯೋತ್ಸವ ಪ್ರಯುಕ್ತ ಶನಿವಾರ ನಡೆದ ಪ್ರಬಂಧ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಸಾಹಿತ್ಯದಿಂದ ಮನ ಶಾಂತಿ ಸಾಧ್ಯವಿದೆ. ಸಮಯ ಸಿಕ್ಕಾಗ ಜಾನಪದ ಸಾಹಿತ್ಯ ಕೃತಿಗಳನ್ನು ಓದಬೇಕು. ಜಾನಪದ ಹಾಡುಗಳನ್ನು ಆಲಿಸಬೇಕು ಎಂದು ಸಲಹೆ ಮಾಡಿದರು.

ADVERTISEMENT

ಬೀದರ್ ಜನತೆಗೆ ದೇಶದ ಸಂಸ್ಕೃತಿ ಪರಿಚಯಿಸುವ ದಿಸೆಯಲ್ಲಿ ತ್ರಿಪುರಾದಿಂದ ತೆಲಂಗಾಣವರೆಗಿನ ಕಲಾವಿದರನ್ನು ಕರೆಸಿ ಜನಪದ ನೃತ್ಯೋತ್ಸವ ನಡೆಸುತ್ತಿರುವ ಡಾ. ರಾಜಕುಮಾರ ಹೆಬ್ಬಾಳೆ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಆಶಯ ನುಡಿ ಆಡಿದರು.

ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಸಂಘ ಟ್ರಸ್ಟ್ ಅಧ್ಯಕ್ಷ ಶಂಕರೆಪ್ಪ ಹೊನ್ನಾ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ವಿನೋದ ಮೂಲಗೆ, ಪ್ರೊ. ವೈಜಿನಾಥ ಚಿಕ್ಕಬಸೆ, ಸಾಹಿತಿಗಳಾದ ಸಾಧನಾ ರಂಜೋಳಕರ್, ಪುಷ್ಪಾ ಕನಕ, ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ ಕುಚಬಾಳ ಉಪಸ್ಥಿತರಿದ್ದರು.

ಡಾ.ವಿಶ್ವನಾಥ ಕೆ, ಡಾ.ಸಾವಿತ್ರಿಬಾಯಿ ಹೆಬ್ಬಾಳೆ, ಡಾ.ಮಹಾನಂದಾ ಮಡಕಿ, ಡಾ.ಸುನಿತಾ ಕೂಡ್ಲಿಕರ್, ಮಹಾರುದ್ರ ಡಾಕುಳಗಿ, ಡಾ.ಮಹಾದೇವಿ ಭಾಗ್ಯನಗರ, ರೇಣುಕಾ ಮಳ್ಳಿ, ಡಾ.ಸಿದ್ದಣ್ಣ ಕೊಳ್ಳಿ, ಶೈಲಜಾ ಸಿದ್ದವೀರ, ಡಾ.ಜಗದೇವಿ ತಿಪ್ಪಶೆಟ್ಟಿ, ಸಂಗಪ್ಪ ತೌಡಿ, ಸ್ವರೂಪಾ ಕಣಜೆ, ಸಂಗೀತಾ ಮಾನಾ, ಮಹಾದೇವ, ಕಿರಣ ಹಾಗೂ ಇತರರು ಪ್ರಬಂಧ ಮಂಡಿಸಿದರು.

ಮಹಾರುದ್ರ ಡಾಕುಳಗಿ ನಿರೂಪಿಸಿದರು. ಪ್ರಕಾಶ ಕನ್ನಾಳೆ ವಂದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.