ಬೀದರ್: ನಗರದ ವಚನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನೀರು ಹಾಗೂ ಸಿರಿಧಾನ್ಯ ಗಂಜಿ ವಿತರಿಸಲಾಯಿತು.
ವಚನ ಚಾರಿಟೆಬಲ್ ಅಧ್ಯಕ್ಷ ಶಿವಕುಮಾರ ಸಾಲಿ ಮತ್ತು ಸದಸ್ಯರು ನಗರದ ನೌಬಾದ್ ಶಿವನಗರ, ಮಡಿವಾಳ ವೃತ್ತ, ರೋಟರಿ ವೃತ್ತ, ಸಿದ್ಧಾರ್ಥ ಕಾಲೇಜು, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಚೌಬಾರಾ, ಗವಾನ್ ವೃತ್ತ, ಶಾಪುರ ಗೇಟ್, ಮೈಲೂರ ಕ್ರಾಸ್, ಗಾಂಧಿ ಗಂಜ್, ಗುಂಪಾ ರಿಂಗ್ ರೋಡ್, ತೆಲಂಗಾಣ ಗಡಿ ಸೇರಿದಂತೆ ವಿವಿಧೆಡೆ ಕರ್ತವ್ಯದಲ್ಲಿ ನಿರತರಾದ ಪೊಲೀಸ್ ಸಿಬ್ಬಂದಿಗೆ ಶುದ್ಧ ಕುಡಿಯುವ ನೀರು ಹಾಗೂ ಸಿರಿಧಾನ್ಯ ಗಂಜಿ ವಿತರಿಸಿದರು.
‘ವೈದ್ಯರು ಹಾಗೂ ಪೊಲೀಸರು ಜನರ ರಕ್ಷಣೆಯಲ್ಲಿ ತಮ್ಮ ಜೀವನದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಂತವರನ್ನು ಸಮಾಜ ಗುರುತಿಸಿ ಬೆನ್ನು ತಟ್ಟಬೇಕಾಗಿದೆ’ ಎಂದು ವೀರಪ್ಪ ಜೀರಗೆ, ಜಗನ್ನಾಥ ಶಿವಯೋಗಿ, ಸಂಗಾರಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.