ADVERTISEMENT

ಓದುವ ಹವ್ಯಾಸ ಬೆಳೆಸೋಣ:ಶ್ರೀ ಬಸವಲಿಂಗ ಪಟ್ಟದ್ದೇವರು,

ಭಾಲ್ಕಿ ಹಿರೇಮಠ ಸಂಸ್ಥಾನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 15:30 IST
Last Updated 7 ಜೂನ್ 2021, 15:30 IST
ಬಸವಲಿಂಗ ಪಟ್ಟದ್ದೇವರು
ಬಸವಲಿಂಗ ಪಟ್ಟದ್ದೇವರು   

ಬೀದರ್: ಮನುಷ್ಯನ ಜೀವನ ಸಕಾರಾತ್ಮವಾಗಿ ಎತ್ತರಕ್ಕೆ ಬೆಳೆಯಬೇಕಾದರೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಮುಖ್ಯ. ಒಳ್ಳೆಯ ಗ್ರಂಥಗಳು ನಮ್ಮಲ್ಲಿ ಸದ್ಗುಣ ಮೂಡಿಸುತ್ತವೆ. ಮನಸ್ಸು ಭಾವ ಹೃದಯ ಸಂಸ್ಕಾರವಂತರನ್ನಾಗಿ ಮಾಡುತ್ತವೆ. ವಿಶಾಲಭಾವ ಬೆಳೆಸುತ್ತವೆ. ಜ್ಞಾನದ ನಿಧಿ ಹೆಚ್ಚಾಗಿಸುತ್ತದೆ.

‘ಮೈಯಲ್ಲಿ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಕೈಯಲ್ಲಿ ಒಂದು ಪುಸ್ತಕವಿರಬೇಕು’ ಎಂದು ಮಹಾತ್ಮರು ಹೇಳುತ್ತಾರೆ. ಇದರರ್ಥ ನಾವು ಬಹಿರಂಗವಾಗಿ ಶೃಂಗಾರ ಮಾಡುವುಕ್ಕಿಂತಲೂ ಆಂತರಿಕವಾಗಿ ಸೌಂದರ್ಯವಂತರಾಗಬೇಕು. ಪುಸ್ತಗಕಗಳು ನಮ್ಮ ಅಂತರಂಗ ಸುಂದರ ಮಾಡುತ್ತವೆ.

‘ಪುಸ್ತಕಗಳು ಜಗತ್ತನ್ನೇ ಆಳುತ್ತವೆ’ ಎಂಬ ಒಂದು ಮಾತು ಇದೆ. ಪುಸ್ತಕವೆಂದರೆ, ಬರೀ ಹಾಳೆ ಅಲ್ಲ. ಅದು ಜ್ಞಾನಸಂಪತ್ತನ್ನು ಒಳಗೊಂಡಿರುವ ಅಮೂಲ್ಯ ನಿಧಿ. ಈ ಜಗತ್ತನ್ನು ಪ್ರೀತಿ, ಮೈತ್ರಿ, ವಿಶ್ವಾಸದಿಂದ ಗೆಲ್ಲಬೇಕಾದರೆ ನಾವು ಜ್ಞಾನ ಸಂಪಾದಿಸಬೇಕು. ಜ್ಞಾನ ಸಂಪಾದನೆಯಲ್ಲಿ ನಮಗೆ ಸಹಾಯ ಮಾಡುವ ಉತ್ತಮ ಗೆಳೆಯ ಎಂದರೆ ಪುಸ್ತಕ. ಗ್ರಂಥ ನಮ್ಮ ಬದುಕು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಓದುವ ಹವ್ಯಾಸ ಬೆಳೆಸಿಕೊಳ್ಳೋಣ. ಉತ್ತಮ ಪುಸ್ತಕ ಓದೋಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.