ADVERTISEMENT

ಬೀದರ್‌: ಸನ್ಮಾರ್ಗದೆಡೆ ಸಾಗಲು ದೇವರು ಅನುಗ್ರಹಿಸಲಿ- ವಹೀದ್‌ ಖಾಸ್ಮಿ ಸಂದೇಶ

ಮೌಲಾನಾ ಸಯ್ಯದ್‌ ಅಬ್ದುಲ್‌ ವಹೀದ್‌ ಖಾಸ್ಮಿ ಸಂದೇಶ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 14:45 IST
Last Updated 29 ಅಕ್ಟೋಬರ್ 2020, 14:45 IST
ಮೌಲಾನಾ ಸಯ್ಯದ್‌ ಅಬ್ದುಲ್‌ ವಹೀದ್‌ ಖಾಸ್ಮಿ
ಮೌಲಾನಾ ಸಯ್ಯದ್‌ ಅಬ್ದುಲ್‌ ವಹೀದ್‌ ಖಾಸ್ಮಿ   

ಬೀದರ್‌: ಕರುಣಾಳು ಪ್ರವಾದಿ ಮಹಮ್ಮದ್‌ ಅವರು ಈ ಭೂಲೋಕದ ಮೇಲೆ ಆಗಮಿಸಿದಾಗ ಜಗತ್ತು ಅಜ್ಞಾನ ಹಾಗೂ ಅಂಧಕಾರದಲ್ಲಿ ಇತ್ತು. ಅನ್ಯಾಯ ಅತ್ಯಾಚಾರ ಸಾಮಾನ್ಯವಾಗಿತ್ತು. ಬಲಶಾಲಿಗಳು ದುರ್ಬಲರ ಮೇಲೆ ಅನ್ಯಾಯ ಮಾಡುತ್ತಿದ್ದರು. ಹೆಣ್ಣುಮಕ್ಕಳನ್ನು ಜೀವಂತ ಹೂಳಲಾಗುತ್ತಿತ್ತು. ಪ್ರವಾದಿ ಅವರು ತಮ್ಮ ಅತ್ಯುತ್ತಮ ಗುಣಗಳ ಮೂಲಕ ಏಕದೇವ ಉಪಾಸನೆಯ ಸಂದೇಶ ನೀಡಿದರು.
ತಾನು ಪ್ರವಾದಿಯಾಗಿದ್ದೇನೆ ಎಂದು ಸಾರಿದರು. ಇವರ ಮಾತನ್ನು ಕೇಳಿದವರು ಹಾಗೂ ಅನುಸರಿಸಿದವರು ಬದುಕಿನ ಅವಧಿಯಲ್ಲಿ ಹಾಗೂ ಮರಣಾನಂತರವೂ ಸಂತೃಪ್ತಿ ಪಡೆದರು. ಕ್ಷಮಾ ಗುಣದಿಂದ ಕಡು ವೈರಿಗಳನ್ನು ಕ್ಷಮಿಸಿ ತಮ್ಮ ಸಮೀಪ ಮಾಡಿಕೊಂಡರು.

ಪ್ರಸ್ತುತ ಯಾರಾದರೂ ಅವರ ಅತ್ಯುತ್ತಮ ಗುಣ, ನಡತೆ ಹಾಗೂ ಪವಿತ್ರ ಜೀವನದ ಮೇಲೆ ದೃಷ್ಟಿ ಹಾಯಿಸಿ ಸನ್ಮಾರ್ಗದ ಅನ್ವೇಷಣೆ ಮಾಡಲು ಬಯಸುತ್ತಾರೋ ಅವರು ಸನ್ಮಾರ್ಗ ಕಾಣುತ್ತಾರೆ. ದೇವರು ಪ್ರತಿಯೊಬ್ಬರಿಗೂ ಪ್ರವಾದಿ ಅವರ ಗುಣ ನಡತೆಯನ್ನು ಅರಿತುಕೊಳ್ಳಲು ಹಾಗೂ ಅನುಸರಿಸಲು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.

-ಮೆಹಮೂದ್‌ ಗವಾನ್‌ ಮಸೀದಿಯ ಮೌಲಾನಾ ಸಯ್ಯದ್‌ ಅಬ್ದುಲ್‌ ವಹೀದ್‌ ಖಾಸ್ಮಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.