ADVERTISEMENT

ನಾಗ ಪಂಚಮಿ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 7:34 IST
Last Updated 14 ಆಗಸ್ಟ್ 2021, 7:34 IST
ನಾಗಪಂಚಮಿ ಪ್ರಯುಕ್ತ ಮಹಿಳೆಯರು ಬೀದರ್‌ನ ಜನವಾಡ ರಸ್ತೆ ಬದಿಯ ಮರದ ಕೆಳಗೆ ಇರುವ ಹುತ್ತಕ್ಕೆ ಹಾಲೆರೆದರು
ನಾಗಪಂಚಮಿ ಪ್ರಯುಕ್ತ ಮಹಿಳೆಯರು ಬೀದರ್‌ನ ಜನವಾಡ ರಸ್ತೆ ಬದಿಯ ಮರದ ಕೆಳಗೆ ಇರುವ ಹುತ್ತಕ್ಕೆ ಹಾಲೆರೆದರು   

ಬೀದರ್: ಕೋವಿಡ್‌ ಕಾರಣ ಜಿಲ್ಲೆಯಾದ್ಯಂತ ಶುಕ್ರವಾರ ನಾಗರ ಪಂಚಮಿಯನ್ನು ಸರಳವಾಗಿ ಆಚರಿಸಲಾಯಿತು.
ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ನಾಗದೇವತೆ ಮೂರ್ತಿ ಹಾಗೂ ಅರಳಿ ಮರದ ಕೆಳಗೆ ಇರುವ ಹುತ್ತಗಳಿಗೆ ಹಾಲು ಎರೆದು ಪೂಜೆ ಸಲ್ಲಿಸಿದರು.

ಜನವಾಡ ರಸ್ತೆ, ಲಾಡಗೇರಿ, ಪ್ರತಾಪನಗರ, ಶಿವನಗರ, ಹೂಗೇರಿ, ನೌಬಾದ್‌, ಗುಂಪಾ ಹಾಗೂ ಮೈಲೂರಲ್ಲಿ ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸಿ ನಾಗದೇವತೆಗೆ ಪೂಜೆ
ಮಾಡಿದರು.

ಸಂಜೆ ಗ್ರಾಮಗಳಲ್ಲಿ ಹಬ್ಬದ ಶುಭ ಕೋರಿ ಮಹಿಳೆಯರು ದೇವಸ್ಥಾನಗಳ ಆವರಣದಲ್ಲಿ ಸೇರಿ ಬುಲಾಯಿ ಹಾಡುಗಳನ್ನು ಹಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.