ADVERTISEMENT

ನರೇಂದ್ರ ಮೋದಿ ಉದ್ಯಾನ ಉದ್ಘಾಟನೆ

15 ಉದ್ಯಾನಗಳಿಗೆ ಮಹಾ ಪುರುಷರ ಹೆಸರು: ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 15:06 IST
Last Updated 7 ಅಕ್ಟೋಬರ್ 2021, 15:06 IST
ಬೀದರ್‌ನ ಗುರುದ್ವಾರ ಬಳಿಯ ತೇಲಿ ಲೇಔಟ್‍ನಲ್ಲಿ ನಿರ್ಮಿಸಲಾದ ನರೇಂದ್ರ ಮೋದಿ (ನಮೋ) ಉದ್ಯಾನವನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಉದ್ಘಾಟಿಸಿದರು. ಸಚ್ಚಿದಾನಂದ ಚಿದ್ರೆ, ಮಹೇಶ್ವರ ಸ್ವಾಮಿ, ಅನಿಲ್ ಭೂಸಾರೆ, ಶೈಲೇಂದ್ರ ಬೆಲ್ದಾಳೆ, ಶಿವಾನಂದ ಮಂಠಾಳಕರ್, ಗುರುನಾಥ ಜ್ಯಾಂತಿಕರ್, ನಿತಿನ್ ಕರ್ಪೂರ, ಹಣಮಂತ ಬುಳ್ಳಾ, ಚಂದ್ರಶೇಖರ ಪಾಟೀಲ, ರಾಜು ಬಿರಾದಾರ, ಶಶಿಧರ ಸ್ವಾಮಿ, ನರೇಶ ಗೌಳಿ ಇದ್ದರು
ಬೀದರ್‌ನ ಗುರುದ್ವಾರ ಬಳಿಯ ತೇಲಿ ಲೇಔಟ್‍ನಲ್ಲಿ ನಿರ್ಮಿಸಲಾದ ನರೇಂದ್ರ ಮೋದಿ (ನಮೋ) ಉದ್ಯಾನವನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಉದ್ಘಾಟಿಸಿದರು. ಸಚ್ಚಿದಾನಂದ ಚಿದ್ರೆ, ಮಹೇಶ್ವರ ಸ್ವಾಮಿ, ಅನಿಲ್ ಭೂಸಾರೆ, ಶೈಲೇಂದ್ರ ಬೆಲ್ದಾಳೆ, ಶಿವಾನಂದ ಮಂಠಾಳಕರ್, ಗುರುನಾಥ ಜ್ಯಾಂತಿಕರ್, ನಿತಿನ್ ಕರ್ಪೂರ, ಹಣಮಂತ ಬುಳ್ಳಾ, ಚಂದ್ರಶೇಖರ ಪಾಟೀಲ, ರಾಜು ಬಿರಾದಾರ, ಶಶಿಧರ ಸ್ವಾಮಿ, ನರೇಶ ಗೌಳಿ ಇದ್ದರು   

ಬೀದರ್: ಇಲ್ಲಿಯ ಗುರುದ್ವಾರ ಬಳಿಯ ತೇಲಿ ಲೇಔಟ್‍ನಲ್ಲಿ ಬೀದರ್ ನಗರಾಭಿವೃದ್ಧಿ ಪಾಧಿಕಾರದ ವತಿಯಿಂದ ನಿರ್ಮಿಸಲಾದ ನರೇಂದ್ರ ಮೋದಿ(ನಮೋ) ಉದ್ಯಾನ ಗುರುವಾರ ಉದ್ಘಾಟನೆಗೊಂಡಿತು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಬಾಬುವಾಲಿ ಉದ್ಯಾನವನ್ನು ಉದ್ಘಾಟಿಸಿದರು.

ಅಭಿಯಾನದ ಅಂಗವಾಗಿ ಉದ್ಯಾನಕ್ಕೆ ನರೇಂದ್ರ ಮೋದಿ ಉದ್ಯಾನ ಎಂದು ಹೆಸರಿಡಲಾಗಿದೆ. ಪ್ರಧಾನಿ ಅವರ 71ನೇ ಜನ್ಮದಿನದ ನಿಮಿತ್ತ 71 ಸಸಿಗಳನ್ನೂ ನೆಡಲಾಗಿದೆ. ಉದ್ಯಾನವನ್ನು ಮಾದರಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ನಗರದಲ್ಲಿ 15 ಉದ್ಯಾನಗಳಿಗೆ ಮಹಾ ಪುರುಷರ ಹೆಸರು ಇಡಲು ನಿರ್ಧರಿಸಲಾಗಿದೆ. ಬಡಾವಣೆಯೊಂದಕ್ಕೆ ಬಿಎಸ್‍ವೈ ಬಡಾವಣೆ ಎಂದು ಹೆಸರಿಡಲಾಗಿದೆ. ಗಣೇಶ ವಿಸರ್ಜನೆ ಹೊಂಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರಿಗೆ ಅನುದಾನ ಕೋರಲಾಗಿದೆ ಎಂದು ಹೇಳಿದರು.

ನಗರದಲ್ಲಿನ ಕೆರೆಗಳ ಅಭಿವೃದ್ಧಿಗೆ ಶೀಘ್ರ ಚಾಲನೆ ನೀಡಲಾಗುವುದು. ಪಾಪನಾಶ ಕೆರೆ ಅಭಿವೃದ್ಧಿಗೆ ಈಗಾಗಲೇ ರೂ. 2 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ್ ಭೂಸಾರೆ, ಬಿಜೆಪಿ ಮುಖಂಡರಾದ ಗುರುನಾಥ ಜ್ಯಾಂತಿಕರ್, ಲುಂಬಿಣಿ ಗೌತಮ, ಮಹೇಶ್ವರ ಸ್ವಾಮಿ, ನಿತಿನ್ ಕರ್ಪೂರ್, ಹಣಮಂತ ಬುಳ್ಳಾ, ಚಂದ್ರಕಲಾ ವಿಶ್ವಕರ್ಮ, ಮಹಾನಂದ ಪಾಟೀಲ, ಹೇಮಲತಾ ಜೋಶಿ, ಲಕ್ಷ್ಮಿ, ಚಂದ್ರಶೇಖರ ಪಾಟೀಲ, ಸಚ್ಚಿದಾನಂದ ಚಿದ್ರಿ, ರಾಜು ಬಿರಾದಾರ, ನರೇಶ ಗೌಳಿ, ಶಶಿಧರ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.