ADVERTISEMENT

ಉಚಿತ ಆಮ್ಲಜನಕಕ್ಕೆ ಸಸಿ ನೆಡಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 5:09 IST
Last Updated 18 ಜುಲೈ 2021, 5:09 IST
ಬೀದರ್‍ನ ವೈದಿಕ ಕಾಲೊನಿಯಲ್ಲಿ ಬರೀದ್‍ಶಾಹಿ ಯೋಗ ತಂಡದ ವತಿಯಿಂದ ಸಾರ್ವಜನಿಕರಿಗೆ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು
ಬೀದರ್‍ನ ವೈದಿಕ ಕಾಲೊನಿಯಲ್ಲಿ ಬರೀದ್‍ಶಾಹಿ ಯೋಗ ತಂಡದ ವತಿಯಿಂದ ಸಾರ್ವಜನಿಕರಿಗೆ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು   

ಬೀದರ್: ಉಚಿತ ಆಮ್ಲಜನಕಕ್ಕೆ ಪ್ರತಿಯೊಬ್ಬರೂ ಸಸಿ ನೆಡಬೇಕು ಎಂದು ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ವೀರಭದ್ರಪ್ಪ ಉಪ್ಪಿನ್ ಹೇಳಿದರು.

ನಗರದ ವೈದಿಕ ಕಾಲೊನಿಯಲ್ಲಿ ಬರೀದ್‍ಶಾಹಿ ಯೋಗ ತಂಡದ ವತಿಯಿಂದ ನಡೆದ ಸಸಿ ವಿತರಣೆ, ನೆಡುವಿಕೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಅನೇಕರು ಆಮ್ಲಜನಕ ಕೊರತೆಯಿಂದ ಪ್ರಾಣ ಕಳೆದುಕೊಂಡರು. ಗಿಡಮರಗಳು ಉಚಿತವಾಗಿ ಆಮ್ಲಜನಕ ಕೊಡುತ್ತಿದ್ದರೂ ಸ್ವಾರ್ಥಕ್ಕೆ ಬೆನ್ನು ಬಿದ್ದು ಕಾಡು ನಾಶ ಮಾಡುತ್ತಿದ್ದೇವೆ. ಆಮ್ಲಜನಕ ಕೊರತೆ ಅದರ ಪರಿಣಾಮವೇ ಆಗಿದೆ ಎಂದು ತಿಳಿಸಿದರು.

ADVERTISEMENT

ಆಮ್ಲಜನಕ ನೀಡುವ ಅಕೇಸಿಯಾ, ಪಾಮ್, ಅಲೋವಿರಾ ಮೊದಲಾದ ಗಿಡಗಳನ್ನು ಮನೆ ಆವರಣದಲ್ಲಿ ನೆಡಬೇಕು ಎಂದು ಯೋಗ ಕೇಂದ್ರದ ಮೇಲ್ವಿಚಾರಕ ಗಂಗಪ್ಪ ಸಾವಳೆ ಹೇಳಿದರು.

ಉದ್ಯಮಿ ರಾಮಕೃಷ್ಣ ಮುನಿಗ್ಯಾಲ, ಕಾಲೊನಿಯ ಗುರುರಾಜ, ಸವಿತಾ, ಶಿವಲೀಲಾ, ಅಕ್ಷತಾ, ಉತ್ತರಾ, ಸಂಜೀವಕುಮಾರ ಶೀಲವಂತ, ಸುರೇಶ, ನಿಜಲಿಂಗಪ್ಪ ತಗಾರೆ, ಗಂಗಾಧರ ಪಾಟೀಲ, ರಮೇಶ, ಬಸವರಾಜ, ಉಮೇಶ, ಚಂದ್ರಶೇಖರ ದೇವಣಿ, ವಿಜಯಕುಮಾರ ಬಚ್ಚಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.