ADVERTISEMENT

ಯುವ ಬರಹಗಾರರಿಗೆ ಚಂಪಾ ಸ್ಫೂರ್ತಿ: ವೀರಂತ ರೆಡ್ಡಿ ಜಂಪಾ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 6:29 IST
Last Updated 12 ಜನವರಿ 2022, 6:29 IST
ಹುಮನಾಬಾದ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಪ್ರೌಢ ವಿಭಾಗದಲ್ಲಿ ಧರಿನಾಡು ಕನ್ನಡ ಸಂಘದಿಂದ ನಡೆದ ಚಂಪಾ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ ಮಾತನಾಡಿದರು
ಹುಮನಾಬಾದ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಪ್ರೌಢ ವಿಭಾಗದಲ್ಲಿ ಧರಿನಾಡು ಕನ್ನಡ ಸಂಘದಿಂದ ನಡೆದ ಚಂಪಾ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ ಮಾತನಾಡಿದರು   

ಹುಮನಾಬಾದ್: ತಮ್ಮ ಮೊನಚಾದ ಲೇಖನ, ಭಾಷಣಗಳಲ್ಲದೆ ಸಾಮಾಜಿಕ ಚಳವಳಿಗಳಲ್ಲಿಯು ಪ್ರೊ. ಚಂಪಾ ಅವರು ಸದಾ ಮುಂಚೂಣಿಯಲ್ಲಿ ಇರುತ್ತಿ ದ್ದರು ಎಂದು ಕಸಾಪ ಮಾಜಿ ಅಧ್ಯಕ್ಷ ವೀರಂತರೆಡ್ಡಿ ಜಂಪಾ ಹೇಳಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಪ್ರೌಢ ವಿಭಾಗದಲ್ಲಿ ಧರಿನಾಡು ಕನ್ನಡ ಸಂಘದಿಂದ ನಡೆದ ಚಂಪಾ ಶ್ರದ್ಧಾಂಜಲಿ ಸಭೆಯಲ್ಲಿ
ಅವರು ಮಾತನಾಡಿದರು.

ಸಾಹಿತಿ ಕಾಶಿನಾಥ ರೆಡ್ಡಿ ಅವರು ಮಾತನಾಡಿ, ಚಂಪಾ ಅವರು ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತವಾಗಿ, ಇತರ ಅನೇಕ ಯುವ ಬರಹಗಾರರಿಗೆ ಸ್ಪೂರ್ತಿಯಾಗಿ ಅವರ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದ್ದರು ಎಂದರು.

ADVERTISEMENT

ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಹಾಗೂ ರಾಜ್ಯ ಗೋಂಧಳಿ ಸಮಾಜ ಸಂಘಟನೆಯ ಅಧ್ಯಕ್ಷ ಸಿದ್ರಾಮ ವಾಘ ಮಾರೆ ಮಾತನಾಡಿದರು.

ಸಂಘದ ಅಧ್ಯಕ್ಷ ಸಿದ್ಧಾರ್ಥ ಮಿತ್ರಾ, ಡಾ.ಕೆ.ಚಂದ್ರಕಾಂತ, ಸಂಗಮ್ಮ ಸಜ್ಜನ, ಶೇಖ ಮಹಿಬೂಬ ಪಟೇಲ್, ರವಿ ಮಲಶೆಟ್ಟಿ, ತ್ರಿವೇಣಿ ಗಂಟಕರ, ಬಷಿರುದ್ದಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.