ADVERTISEMENT

ಜನವಾಡ | ಹಾವು ಕಡಿದು ಮುಖ್ಯಶಿಕ್ಷಕ ಸಾವು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 12:36 IST
Last Updated 27 ಡಿಸೆಂಬರ್ 2019, 12:36 IST
ವೈಜಿನಾಥ ಗೋಪಿನಾಥ
ವೈಜಿನಾಥ ಗೋಪಿನಾಥ   

ಜನವಾಡ: ಹೊಲದಲ್ಲಿ ಹಾವು ಕಡಿದು ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಬೀದರ್ ತಾಲ್ಲೂಕಿನ ಸಿಂದೋಲ್ ತಾಂಡಾದಲ್ಲಿ ಬುಧವಾರ ನಡೆದಿದೆ.

ಕಾಶೆಂಪುರ(ಸಿ) ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿದ್ದ ವೈಜಿನಾಥ ಗೋಪಿನಾಥ್ (54) ಮೃತಪಟ್ಟವರು.

ವೈಜಿನಾಥ ಅವರು ಎಳ್ಳಮಾವಾಸ್ಯೆ ನಿಮಿತ್ತ ತಮ್ಮ ಸ್ವಗ್ರಾಮ ಸಿಂದೋಲ್ ತಾಂಡಾಗೆ ಹೋಗಿದ್ದಾಗ ಹೊಲದಲ್ಲಿ ಹಾವು ಕಡಿದಿತ್ತು. ತಕ್ಷಣ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.