ADVERTISEMENT

ಬೀದರ್: ಸೇಂಟ್ ಜೋಸೆಫ್ ಚರ್ಚ್: 40ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 16:02 IST
Last Updated 4 ಜುಲೈ 2022, 16:02 IST
ಬೀದರ್‌ನ ಸೇಂಟ್ ಜೋಸೆಫ್ ಚರ್ಚ್‍ನಲ್ಲಿ ಆಯೋಜಿಸಿದ್ದ 40ನೇ ವಾರ್ಷಿಕೋತ್ಸವದಲ್ಲಿ ಕಲಬುರಗಿ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂಡ ಅವರನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಹಾಗೂ ಫಾದರ್ ವಿಲ್ಸನ್ ಸನ್ಮಾನಿಸಿದರು
ಬೀದರ್‌ನ ಸೇಂಟ್ ಜೋಸೆಫ್ ಚರ್ಚ್‍ನಲ್ಲಿ ಆಯೋಜಿಸಿದ್ದ 40ನೇ ವಾರ್ಷಿಕೋತ್ಸವದಲ್ಲಿ ಕಲಬುರಗಿ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂಡ ಅವರನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಹಾಗೂ ಫಾದರ್ ವಿಲ್ಸನ್ ಸನ್ಮಾನಿಸಿದರು   

ಬೀದರ್: ನಗರದ ಬೀದರ್-ಜಹೀರಾಬಾದ್ ಮುಖ್ಯರಸ್ತೆಯ ಶಹಾಪುರ ಗೇಟ್ ಬಳಿ ಇರುವ ಸೇಂಟ್ ಜೋಸೆಫ್ ಚರ್ಚ್‍ನಲ್ಲಿ 40ನೇ ವಾರ್ಷಿಕೋತ್ಸವ ಸಂಭ್ರಮ, ಸಡಗರದಿಂದ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂಡ ಅವರು, ಚರ್ಚ್‍ಗಳು, ಕ್ರೈಸ್ತ ಸಂಘ ಸಂಸ್ಥೆಗಳು ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡಿವೆ. ಉತ್ತಮ ಸಮಾಜ ನಿರ್ಮಾಣವೇ ಚರ್ಚ್‍ಗಳ ಧ್ಯೇಯವಾಗಿದೆ ಎಂದು ಹೇಳಿದರು.


ಕನ್ನಡ ಪ್ರಾಧ್ಯಾಪಕ ಬಸವರಾಜ ಮೂಲಗೆ ಅವರು ಸಮಾಜಕ್ಕೆ ಕ್ರೈಸ್ತರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದಶಕಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಾಬರ್ಟ್ ಮೈಕಲ್ ಮಿರಾಂಡ ಅವರನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಜಾಗೀರದಾರ್ ಹಾಗೂ ನೇತೃತ್ವ ವಹಿಸಿದ್ದ ಫಾದರ್ ವಿಲ್ಸನ್ ಅವರು ಶಾಲು ಹೊದಿಸಿ ಸನ್ಮಾನಿಸಿದರು.

ADVERTISEMENT


ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ, ವೆಲ್‍ಮೆಗ್ನಾ ನೇತ್ರ ಆಸ್ಪತ್ರೆಯ ಮುಖ್ಯಸ್ಥೆ ಡಾ. ಸಿಬಿಲ್ ಸಾಲಿನ್ಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.