ADVERTISEMENT

ಸುವಿತ್ ಮೋರೆ ಸೇರಿ ಮೂವರಿಗೆ ರಾಜ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 3:20 IST
Last Updated 19 ಮೇ 2022, 3:20 IST
ಬೀದರ್‌ನ ಸುವಿತ್ ಎಸ್. ಮೋರೆ ಅವರಿಗೆ ಕೊಪ್ಪಳದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಯೂತ್ ವೆಲ್‍ಫೇರ್ ಅಸೋಸಿಯೇಷನ್‍ನ ಕ್ರೀಡಾರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬೀದರ್‌ನ ಸುವಿತ್ ಎಸ್. ಮೋರೆ ಅವರಿಗೆ ಕೊಪ್ಪಳದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಯೂತ್ ವೆಲ್‍ಫೇರ್ ಅಸೋಸಿಯೇಷನ್‍ನ ಕ್ರೀಡಾರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಬೀದರ್‌: ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಜಿಲ್ಲೆಯ ಸುವಿತ್ ಸೂರ್ಯಕಾಂತ ಮೋರೆ ಸೇರಿ ಮೂವರಿಗೆ ಕರ್ನಾಟಕ ಯೂತ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ಕೊಡಲಾಗುವ ಕ್ರೀಡಾರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.

ಯೋಗೇಶ್ವರಿ ಸ್ವಾಮಿ ಹಾಗೂ ಮಣಿರತ್ನ ಮಲ್ಲಿಕಾರ್ಜುನ ಮನ್ನಳ್ಳಿ ಪ್ರಶಸ್ತಿಗೆ ಭಾಜನರಾದ ಇತರ ಇಬ್ಬರು.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ADVERTISEMENT

ಅಭಿನವ ಶ್ರೀಕಂಠ ಸ್ವಾಮೀಜಿ, ಡಾ.ಜಿ.ಸದಾನಂದ ಸ್ವಾಮಿ, ಅಸೋಸಿಯೇಷನ್ ಸಂಸ್ಥಾಪಕ ಡಾ.ಎ.ಪಿ.ಶ್ರೀನಾಥ ಹಾಗೂ ಕಾರ್ಯದರ್ಶಿ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.