ಬೀದರ್: ನಗರದ ಜನವಾಡ ರಸ್ತೆಯಲ್ಲಿರುವ ದೂರದರ್ಶನ ಮರು ಪ್ರಸಾರ ಕೇಂದ್ರವು ಇದೇ 31ರಂದು ತನ್ನ ಪ್ರಸರಣ ಸಂಪೂರ್ಣ ಸ್ಥಗಿತಗೊಳಿಸಲಿದೆ ಎಂದು ಪ್ರಸಾರ ಭಾರತಿ ಮಂಡಳಿಯ ಉಪ ನಿರ್ದೇಶಕ ಜೆ.ಬಿ.ಚರಕಪಳ್ಳಿ ತಿಳಿಸಿದ್ದಾರೆ.
ಡಿಜಿಟಲೀಕರಣದ ಭಾಗವಾಗಿ ಲೋ ಪವರ್ ಟ್ರಾನ್ಸ್ಮೀಟರ್- ಎಲ್ಪಿಟಿಗಳನ್ನು ಮುಚ್ಚುವ ಪ್ರಕ್ರಿಯೆ ನಾಲ್ಕು ವರ್ಷಗಳಿಂದ ನಡೆದಿದೆ. ದೂರದರ್ಶನವು ಡಿಟಿಎಚ್ ಸೇವೆ ಆರಂಭಿಸಿದೆ. ಹೈಪವರ್ ಟ್ರಾನ್ಸ್ಮೀಟರ್ಗಳೂ ಬಲು ದೂರದವರೆಗೆ ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಮರು ಪ್ರಸಾರ ಕೇಂದ್ರಗಳು ತಮ್ಮ ಮಹತ್ವ ಕಳೆದುಕೊಂಡಿವೆ.
ಈಗ ಎಂಟೆನಾ ಅಳವಡಿಸಿ ಟಿ.ವಿ. ನೋಡುವವರೂ ಇಲ್ಲ. ಆದ್ದರಿಂದ ಸಾಂಪ್ರದಾಯಿಕ ಅನ್ಲಾಗ್ ಮರುಪ್ರಸಾರ ಕೇಂದ್ರವನ್ನು ಮುಚ್ಚಲು ನಿರ್ಧರಿಸಲಾಗಿದೆ. ಇದರಿಂದ ದೂರದರ್ಶನ ಕಾರ್ಯಕ್ರಮಗಳ ಪ್ರಸಾರದಲ್ಲಿ ವ್ಯತ್ಯಯ ಉಂಟಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.