ಬೀದರ್: ಮಹಿಳೆಯರು ಸದಾ ಜಾಗೃತರಾಗಿಯೇ ಇದ್ದಾರೆ. ಹೀಗಾಗಿ ಅವರನ್ನು ಜಾಗೃತಗೊಳಿಸಬೇಕಿಲ್ಲ. ಬದಲಾಗಿ, ಪುರುಷರನ್ನು ಜಾಗೃತಗೊಳಿಸುವ ಅವಶ್ಯಕತೆ ಇದೆ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ನುಡಿದರು.
ಬೆಂಗಳೂರಿನ ಸಮಾಜ ಸೇವಾ ಸಮಿತಿ ವತಿಯಿಂದ ಇಲ್ಲಿಯ ವಿದ್ಯಾನಗರ ಕಾಲೊನಿಯ ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಸ್ತ್ರೀಯರನ್ನು ದೇವತೆಯ ರೂಪದಲ್ಲಿ ಕಾಣಲಾಗುತ್ತದೆ. ಪ್ರತಿ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಪಾತ್ರ ಇದ್ದೇ ಇರುತ್ತದೆ ಎಂದು ತಿಳಿಸಿದರು.
ವ್ಯಕ್ತಿಯನ್ನು ಉತ್ತಮ ಪ್ರಜೆಯಾಗಿ ರೂಪಿಸಿ ಸಮಾಜಕ್ಕೆ ಸಮರ್ಪಿಸುವುದು ಸಮಾಜ ಸೇವಾ ಸಮಿತಿಯ ಧ್ಯೇಯವಾಗಿದೆ ಎಂದು ಚಿಂತಕಿ ಎಚ್.ಜಿ. ಶೋಭಾ ಹೇಳಿದರು.
ಸಮಾಜ ಸೇವಾ ಸಮಿತಿಯ ಕಾರ್ಯದರ್ಶಿ ಬಿ.ಎಂ. ಶಶಿಕಲಾ ಮಾತನಾಡಿದರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ವಿಶ್ವ ಹಿಂದೂ ಪರಿಷತ್ತಿನ ರಾಮಕೃಷ್ಣನ್ ಸಾಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಸಾಹಿತಿ ಸಂಜೀವಕುಮಾರ ಅತಿವಾಳೆ, ಮಹಾದೇವಿ ಬಿರಾದಾರ, ಚಿಂತಕಿಯರಾದ ಉಮಾ ಚಿಲ್ಲರ್ಗಿ, ಸರಿತಾ ಹುಡಗಿಕರ್, ಎಚ್.ಜಿ. ಅನ್ನಪೂರ್ಣಮ್ಮ, ರಾಚಮ್ಮ ಪಾಟೀಲ, ಚಂದ್ರಪ್ಪ ವಿ, ವಿಮಲಾಬಾಯಿ ಭೀಮಷಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.