ADVERTISEMENT

ಕೊಪ್ಪ: ಜೆಡಿಎಸ್‌ ಮುಖಂಡನ ಹತ್ಯೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 10:15 IST
Last Updated 30 ನವೆಂಬರ್ 2017, 10:15 IST
ಸಂತೋಷ್‌
ಸಂತೋಷ್‌   

ಕೊಪ್ಪ: ಹೋಬಳಿಯ ಕೆ.ಜಿ. ಕೊಪ್ಪಲು ಗ್ರಾಮದ ಬಳಿ ಬುಧವಾರ ಹಾಡಹಗಲೇ ಜೆಡಿಎಸ್‌ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

ಕೆ. ಮಲ್ಲಿಗೆರೆ ಗ್ರಾಮದ ನಿವಾಸಿ ಸಂತೋಷ್‌ (27) ಮೃತ ವ್ಯಕ್ತಿ. ಕೆ.ಜಿ. ಕೊಪ್ಪಲು ಗ್ರಾಮದ ಮರದ ಕೆಳಗೆ ನಿಂತಿದ್ದ ಸಮಯದಲ್ಲಿ 5–6 ಮಂದಿ ಕಾರಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ.

ಸಂತೋಷ್‌ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಕೆ. ಸುರೇಶ್‌ಗೌಡ ಅವರ ಕಟ್ಟಾ ಅಭಿಮಾನಿ. ಸುರೇಶ್‌ಗೌಡ  ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆ ಗೊಂಡಾಗ ಸಂತೋಷ್‌ ಕೂಡ ಜೆಡಿಎಸ್‌ ಸೇರಿಕೊಂಡರು, ಈಚೆಗೆ ನಡೆದ ಕೊಪ್ಪ ಜಿಲ್ಲಾ ಪಂಚಾಯಿತಿ ಉಪ ಚುನಾವಣೆಯಲ್ಲಿ ಜೆಡಿಎಸ್‌ ಪರ ನಿರಂತರವಾಗಿ ದುಡಿದ್ದರು. ಕೊಲೆಗೆ ರಾಜಕೀಯ ದ್ವೇಷವೇ ಕಾರಣ ಎಂದು ಜನರು ಹೇಳುತ್ತಾರೆ.

ADVERTISEMENT

ಕೊಲೆ ನಡೆದ ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಲಾವಣ್ಯಾ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.