ADVERTISEMENT

ಪ್ರಾಮಾಣಿಕತೆ ಮೆರೆದ ಅಂಚೆ ನೌಕರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 7:26 IST
Last Updated 11 ಡಿಸೆಂಬರ್ 2017, 7:26 IST
ಪ್ರಾಮಾಣಿಕತೆ ಮೆರೆದ ಅಂಚೆ ನೌಕರ
ಪ್ರಾಮಾಣಿಕತೆ ಮೆರೆದ ಅಂಚೆ ನೌಕರ   

ಗುಂಡ್ಲುಪೇಟೆ: ದಾರಿಯಲ್ಲಿ ಸಿಕ್ಕಿದ ₹18,000 ಮೌಲ್ಯದ ಮೊಬೈಲ್‌ ಅನ್ನು ವಾರಸುದಾರರಿಗೆ ತಲುಪಿಸುವ ಮೂಲಕ ಅಂಚೆ ಇಲಾಖೆ ನೌಕರ ಪ್ರಾಮಾಣಿಕತೆ ಮೆರೆದಿದ್ದಾರೆ.

ಪೋಸ್ಟ್‌ಮ್ಯಾನ್‌ ನಾಗರಾಜು ಬೇಗೂರಿನಲ್ಲಿ ಶನಿವಾರ ರಾತ್ರಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮೊಬೈಲ್‌ ದೊರೆತಿತ್ತು. ಅದರಲ್ಲಿದ್ದ ಸಂಖ್ಯೆಗಳಿಗೆ ಕರೆ ಮಾಡಿ ವಾರಸುದಾರರನ್ನು ಪತ್ತೆ ಹಚ್ಚಿದರು.

ನಂಜನಗೂಡಿನ ನವಿಲೂರು ಗ್ರಾಮದ ರವಿ ಮೊಬೈಲ್‌ ಕಳೆದು ಕೊಂಡಿದ್ದವರು. ಬೆಳಿಗ್ಗೆ ಬೇಗೂರಿಗೆ ತೆರಳಿದ ರವಿ ಅವರಿಗೆ ನಾಗರಾಜು ಮೊಬೈಲ್‌ಅನ್ನು ಒಪ್ಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.