ADVERTISEMENT

ಬಸ್ -ಕಾರು ಡಿಕ್ಕಿ: ಒಬ್ಬ ಸಾವು; ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 13:26 IST
Last Updated 6 ಜೂನ್ 2025, 13:26 IST
ಕೊಳ್ಳೇಗಾಲದಲ್ಲಿನಡೆದ ಅಪಘಾತವಾದ ಸ್ಥಳವನ್ನು ಎಎಸ್ ಪಿ ಶಶಿಧರ್, ಡಿವೈಎಸ್ ಪಿ ಧರ್ಮೇಂದ್ರ, ಪಿಎಸ್ಐ ಸುಪ್ರೀತ್ ವೀಕ್ಷಣೆ ಮಾಡಿದರು
ಕೊಳ್ಳೇಗಾಲದಲ್ಲಿನಡೆದ ಅಪಘಾತವಾದ ಸ್ಥಳವನ್ನು ಎಎಸ್ ಪಿ ಶಶಿಧರ್, ಡಿವೈಎಸ್ ಪಿ ಧರ್ಮೇಂದ್ರ, ಪಿಎಸ್ಐ ಸುಪ್ರೀತ್ ವೀಕ್ಷಣೆ ಮಾಡಿದರು   

ಕೊಳ್ಳೇಗಾಲ: ತಾಲ್ಲೂಕಿನ ಧನಗೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲೈ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಶುಕ್ರವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವಿಘ್ನೇಶ್ (26) ಮೃತಪಟ್ಟ ಯುವಕ. ಬಸ್ ಚಾಲಕ ರಮೇಶ್ ಹಾಗೂ ಪ್ರಯಾಣಿಕ ಜಯರಾಮು ಗಾಯಗೊಂಡ ವ್ಯಕ್ತಿಗಳು. ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಶವಗಾರದಲ್ಲಿ ತಂದಿಟ್ಟಿದ್ದಾರೆ. ಎಎಸ್ ಪಿ ಶಶಿಧರ್, ಡಿವೈಎಸ್ ಪಿ ಧರ್ಮೇಂದ್ರ, ಪಿಎಸ್ಐ ಸುಪ್ರೀತ್, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.