ADVERTISEMENT

ಚಾಮರಾಜನಗರ ಸಿಇಒ ಗಾಯಿತ್ರಿ ವರ್ಗ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 16:27 IST
Last Updated 31 ಜನವರಿ 2023, 16:27 IST
ಕೆ.ಎಂ.ಗಾಯತ್ರಿ
ಕೆ.ಎಂ.ಗಾಯತ್ರಿ   

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕೆ.ಎಂ.ಗಾಯಿತ್ರಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಅವರನ್ನು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಆಗಿ ನಿಯೋಜಿಸಲಾಗಿದೆ.

ಮೈಸೂರಿನ ಆಡಾಳಿತಾತ್ಮಕ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ (ಆಡಳಿತ) ಎಸ್‌.ಪೂವಿತಾ ಅವರು ಜಿಲ್ಲಾ ಪಂಚಾಯಿತಿಯ ಹೊಸ ಸಿಇಒ ಆಗಿದ್ದಾರೆ.

ಗಾಯಿತ್ರಿ ಅವರು 2021ರ ಅಕ್ಟೋಬರ್‌ 12ರಂದು ಜಿಲ್ಲೆಯ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.