ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ತಾವರಗಟ್ಟೆ ಬಳಿ ಭಾನುವಾರ ಬೆಳಿಗ್ಗೆ ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿ ಹೊತ್ತೊಯ್ಯುವಾಗ ಸಪಾರಿಗೆ ತೆರಳಿದ್ದ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ.
ತಾವರಗಟ್ಟೆ ವಲಯದಲ್ಲಿ ಪ್ರವಾಸಿಗರು ಅರಣ್ಯ ಇಲಾಖೆಯ ವಾಹನಗಳಲ್ಲಿ ಸಫಾರಿಗೆ ತೆರಳಿದ್ದಾಗ ಹುಲಿ ಎದುರಾಗಿದ್ದು ಜಿಂಕೆಯನ್ನು ಕಚ್ಚಿಕೊಂಡು ರಸ್ತೆ ದಾಟಿಕೊಂಡು ಅರಣ್ಯದೊಳಗೆ ಹೋಗಿದೆ. ಈ ದೃಶ್ಯಗಳನ್ನು ಪ್ರವಾಸಿಗರು ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಪುಳಕಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.