ADVERTISEMENT

ನೀರಿನ ತೊಂಬೆ ಶುಚಿಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:27 IST
Last Updated 3 ಅಕ್ಟೋಬರ್ 2025, 4:27 IST
ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಈಚಲುಕೆಬ್ಬೆ ಗ್ರಾಮದ ನೀರಿನ ತೊಂಬೆಯಲ್ಲಿ ವರ್ಷದಿಂದ ಕಟ್ಟಿರುವ ಪಾಚಿ
ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಈಚಲುಕೆಬ್ಬೆ ಗ್ರಾಮದ ನೀರಿನ ತೊಂಬೆಯಲ್ಲಿ ವರ್ಷದಿಂದ ಕಟ್ಟಿರುವ ಪಾಚಿ   

ಹನೂರು:  ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚಲುಕೆಬ್ಬೆ ಗ್ರಾಮದಲ್ಲಿರುವ ನೀರಿನ ತೊಂಬೆಗಳಲ್ಲಿ ಪಾಚಿ ಕಟ್ಟಿದ್ದು , ಜನರು ಇದರಲ್ಲಿನ ಕಲುಷಿತ ನೀರನ್ನೇ ಕುಡಿಯಬೇಕಿದೆ.ಕೂಡಲೇ ಇದನ್ನು ಶುಚಿಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜು ಒತ್ತಾಯಿಸಿದರು.

ನೀರಿನ ತೊಂಬೆ ಒಳಗೆ ಹಾಗೂ ಹೊರಗೆ ಪಾಚಿ ಹರಡಿಕೊಂಡಿದೆ. ವರ್ಷದಿಂದಲೂ ಇಲ್ಲಿನ ಜನರು ಪಾಚಿ ಕಟ್ಟಿರುವ ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ.  ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗೊತ್ತಿದ್ದರೂ ಶುಚಿಗೊಳಿಸುವ ಕಾರ್ಯ ಮಾಡಿಲ್ಲ. ಇದೇ ನೀರನ್ನು ಕುಡಿಯುತ್ತಿರುವ ಇಲ್ಲಿನ ವೃದ್ಧರು ಹಾಗೂ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು.  ಆರೋಗ್ಯದಲ್ಲಿ ಏರುಪೇರಾದರೆ ಅದಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ.  ಿದರ ಸ್ವಚ್ಛತಾ ಕಾರ್ಯಕ್ಕೆ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT