
ಚಾಮರಾಜನಗರ: ಡಾ.ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟದ ನೂತನ ಅಧ್ಯಕ್ಷರನ್ನಾಗಿ ಎಚ್.ಎಚ್ ನಾಗರಾಜು ಅವರನ್ನು ಆಯ್ಕೆ ಮಾಡಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಡಾ.ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಬಸವನಪುರ ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರಾಮಸಮುದ್ರ ಎಂ.ಶಿವಕುಮಾರ್, ಜಿಲ್ಲಾ ಖಜಾಂಚಿಯಾಗಿ ಬಸವರಾಜು ದ್ವಾರ್ಕಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವಕುಮಾರ್ ರಾಮಸಮುದ್ರ, ಗೌರವ ಸಲಹೆಗಾರರಾಗಿ ಅರಕಲವಾಡಿ ಜವರಯ್ಯ,ಎಲ್ಐಸಿ ರಾಜಣ್ಣ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಹಸಗೂಲಿ ಸಿದ್ದಯ್ಯ, ಮೂಡಹಳ್ಳಿ ಮೂರ್ತಿ, ಚನ್ನಬಸವಯ್ಯ, ಚಾಮರಾಜು, ಬಸವರಾಜು. ಬಿ.ಸಿ.ಸುರೇಶ್, ಗಣೇಶ, ಪ್ರಧಾನ ಸಂಚಾಲಕರಾಗಿ ರಂಗಸ್ವಾಮಿ, ಕಾನೂನು ಸಲಹೆಗಾರರಾಗಿ ಅರಕಲವಾಡಿ ನಾಗೇಂದ್ರ, ಬೂದಿತಿಟ್ಟು ರಾಜೇಂದ್ರ, ಸಿದ್ದೇಶ್, ಮಾದಪ್ಪ ಮಾದಿಗಾರ್ ಸಿದ್ದಯ್ಯ, ನಿರ್ದೇಶಕರಾಗಿ ಪುಟ್ಟರಾಜು ಗಂಗವಾಡಿ, ಎಲ್ಐಸಿ ಸಿದ್ದರಾಜು, ರಾಜು, ನಾರಾಯಣ, ಬೆಳ್ಳಿಯಪ್ಪ, ಸಂತೋಷ ಆಯ್ಕೆಯಾದರು.
ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಮುಖಂಡರಾದ ರಾಮಯ್ಯ, ಸಿದ್ದಪ್ಪಾಜಿ, ಸಿದ್ದರಾಜು, ಸುನೀಲ್, ಮಧು, ಮಾದೇಶ್, ಬಸವರಾಜು, ರಾಚಪ್ಪ, ಎಂ.ಮಾದೇಶ್, ಗಣೇಶ, ವೆಂಕಟೇಶ್, ಕುಮಾರ್, ಗುರುಲಿಂಗಯ್ಯ, ಆರ್.ಎನ್.ಶಿವಣ್ಣ, ರಾಮಸಮುದ್ರ ಸುಂದರ್, ಜಯರಾಜು, ಸ್ವಾಮಿ, ನಾಗಮಲ್ಲು, ಸುರೇಶ್, ನಾಗಯ್ಯ, ವೆಂಕಟೇಶ್, ಆರ್.ಎಚ್.ಲಿಂಗರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.