ADVERTISEMENT

ಪಿಕ್‌ಅಪ್‌ ಪಲ್ಟಿ: ಕಾರ್ಮಿಕ ಸಾವು, 7 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 15:45 IST
Last Updated 12 ಆಗಸ್ಟ್ 2022, 15:45 IST
ಸಂತೇಮರಹಳ್ಳಿ ಸಮೀಪ ಬಾಣಹಳ್ಳಿಯಲ್ಲಿ ಪಲ್ಟಿಯಾದ ವಾಹನ
ಸಂತೇಮರಹಳ್ಳಿ ಸಮೀಪ ಬಾಣಹಳ್ಳಿಯಲ್ಲಿ ಪಲ್ಟಿಯಾದ ವಾಹನ   

ಸಂತೇಮರಹಳ್ಳಿ: ಮೈಸೂರಿನಲ್ಲಿ ಗಾರೆ ಕೆಲಸ ಮುಗಿಸಿಕೊಂಡು ಕಾರ್ಮಿಕರನ್ನು ಸಂತೇಮರಹಳ್ಳಿ ಕಡೆಗೆ ಕರೆ ತರುತ್ತಿದ್ದ ಪಿಕ್‌ಅಪ್ ವಾಹನ ಬಾಣಹಳ್ಳಿ ಹಾಗೂ ಕಮರವಾಡಿ ಗೇಟ್ ನಡುವೆ ಶುಕ್ರವಾರ ಸಂಜೆ ಆಯ ತಪ್ಪಿ ಪಲ್ಟಿ ಹೊಡೆದು ಒಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ.

ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದ ಪ್ರಕಾಶ್‌ (43) ಮೃತಪಟ್ಟವರು. ಗಾಯಗೊಂಡವರೂ ಹೊನ್ನೂರಿನವರೇ ಆಗಿದ್ದು, ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನಿಗೆ ಸಣ್ಣ ‍ಪುಟ್ಟ ಗಾಯಗಳಾಗಿವೆ.

ಎಂಟು ಮಂದಿ ಕಾರ್ಮಿಕರು ಮೈಸೂರಿನಿಂದ ಊರಿಗೆ ಹಿಂದಿರುಗುತ್ತಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಪ್ರಕಾಶ್‌ ಹಾಗೂ ಇತರರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಪ್ರಕಾಶ್‌ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಸ್ಥಳಕ್ಕೆ ಭೇಟಿ ನೀಡಿರುವ ಸಂತೇಮರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.