ADVERTISEMENT

ಚಾಮರಾಜನಗರ: ಟಿಪ್ಪರ್‌ ಮಗುಚಿ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 2:17 IST
Last Updated 16 ಫೆಬ್ರುವರಿ 2021, 2:17 IST
ಮಗುಚಿದ ಟಿಪ್ಪರ್‌ ಅಡಿಯಲ್ಲಿ ಚಾಲಕ ಸಿಲುಕಿರುವುದು
ಮಗುಚಿದ ಟಿಪ್ಪರ್‌ ಅಡಿಯಲ್ಲಿ ಚಾಲಕ ಸಿಲುಕಿರುವುದು   

ಚಾಮರಾಜನಗರ: ತಾಲ್ಲೂಕಿನ ಸಂತೇಮರಹಳ್ಳಿ ಬಳಿಯ ಚುಂಗಡೀಪುರ ಕಲ್ಲಿನ ಕ್ವಾರಿಯೊಂದರಲ್ಲಿ ಸೋಮವಾರ ಸಂಜೆ ಟಿಪ್ಪರ್‌ ಮಗುಚಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಜ್ಯೋತಿಗೌಡನಪುರದ ಶಿವಕುಮಾರ್‌ (32) ಮೃತಪಟ್ಟವರು.

ಚುಂಗಡಿಪುರ ಬಳಿಯ ಕ್ವಾರಿಯೊಂದರಲ್ಲಿ ಶಿವಕುಮಾರ್‌ ಅವರು ಟಿಪ್ಪರ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ ಟಿಪ್ಪರ್‌ ಮಗುಚಿಬಿದ್ದಾಗ, ಅದರ ಅಡಿಗೆ ಸಿಕ್ಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ. ಘಟನೆ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರತಿಭಟನೆ: ತಕ್ಷಣವೇ ಅಲ್ಲಿದ್ದವರು, ಶಿವಕುಮಾರ್‌ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆ ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಗೊತ್ತಾಗಿದೆ. ಸ್ಥಳದಲ್ಲೇ ಮೃತಪಟ್ಟಿದ್ದರೂ, ಶಿವಕುಮಾರ್‌ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದನ್ನು ಖಂಡಿಸಿ ಅವರ ಸಂಬಂಧಿಕರು ಜಿಲ್ಲಾಸ್ಪತ್ರೆ ಮುಂದೆರಾತ್ರಿ ಪ್ರತಿಭಟನೆ ನಡೆಸಿದರು. ಕ್ವಾರಿ ಮಾಲೀಕರು ಸ್ಥಳಕ್ಕೆ ಬಂದು, ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.