ADVERTISEMENT

ಅದ್ಧೂರಿ ವಿಷ್ಣು ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 15:32 IST
Last Updated 12 ಡಿಸೆಂಬರ್ 2019, 15:32 IST
ಆಂಜನೇಯಸ್ವಾಮಿ ದೇವಸ್ಥಾನದ ಹೊರಗೆ ಅರ್ಚಕರು ತೈಲ ಬಟ್ಟೆಯಲ್ಲಿ ಕಟ್ಟಿದ ಜಗಜ್ಯೋತಿ ಬೆಳಗಿಸಿದರು
ಆಂಜನೇಯಸ್ವಾಮಿ ದೇವಸ್ಥಾನದ ಹೊರಗೆ ಅರ್ಚಕರು ತೈಲ ಬಟ್ಟೆಯಲ್ಲಿ ಕಟ್ಟಿದ ಜಗಜ್ಯೋತಿ ಬೆಳಗಿಸಿದರು   

ಚಾಮರಾಜನಗರ:ಇಲ್ಲಿನಹರಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ‘ವಿಷ್ಣು ದೀಪೋತ್ಸವ' ಕಾರ್ಯಕ್ರಮಗುರುವಾರರಾತ್ರಿ ಅದ್ಧೂರಿಯಿಂದ ಜರುಗಿತು.

ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಉತ್ಸವಮೂರ್ತಿಯನ್ನು ದೇವಾಲಯದ ಒಳ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಇದೇ ಸಂದರ್ಭದಲ್ಲಿಭಕ್ತರು ದೇವಾಲಯದ ಒಳಗಡೆಮಣ್ಣಿನಹಣತೆ ಹಚ್ಚಿ ಸಂಭ್ರಮಿಸಿದರು.

ಸಮೀಪದ ಜನಾರ್ಧನಸ್ವಾಮಿದೇವಾಲಯದಲ್ಲಿಯೂ ವಿಷ್ಣು ದೀಪೋತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ಪೂಜಾ ವಿಧಾನಗಳನ್ನು ಪೂರೈಸಿದ ಬಳಿಕ ದೇವರ ಉತ್ಸವ ನಡೆಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ. ಪಾಟೀಲ, ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷ ಚನ್ನಬಸವಸ್ವಾಮೀಜಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಉದ್ದೇಶ: ಎಲ್ಲಿಯೂಯಾವುದೇ ಅಗ್ನಿ ಅವಘಡಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ದೇವಸ್ಥಾನಗಳಲ್ಲಿ ದೇವರನ್ನು ಪ್ರಾರ್ಥಿಸಿ ಸಾಂಕೇತಿಕವಾಗಿ ರಾಜ ಗೋಪುರದ ಬಳಿ ತೈಲಪಟಕ್ಕೆ ಮಂಗಳಾರತಿಯಿಂದ ಹಚ್ಚಿದ ಬೆಂಕಿ ಧಗಧಗನೆ ಉರಿಸಲಾಗುತ್ತದೆ.

ಜಗಜ್ಯೋತಿ: ಅರ್ಚಕರು ದೇವಸ್ಥಾನದ ಹೊರಗೆ ಗೋಪುರದ ಬಳಿ ಜಗಜ್ಯೋತಿ ಬೆಳಗಿಸಿದರು. ಬಳಿಕ ತೈಲ ಬಟ್ಟೆಯ ಕರಿಯನ್ನು ರಕ್ಷಾ ಪ್ರಸಾದವಾಗಿ ಭಕ್ತರಿಗೆ ನೀಡಲಾಯಿತು. ನಂತರ ಮಹಾಮಂಗಳಾರತಿ ತೀರ್ಥ, ಪ್ರಸಾದ ವಿನಿಯೋಗ ಗರುಡೋತ್ಸವ ನಡೆಸಲಾಯಿತು.

ಮಣ್ಣಿನ ಹಣತೆಯನ್ನು ಅಲಂಕರಿಸಿದ್ದ ದೇವಸ್ಥಾನ ವರ್ಣ ವೈಭವಗಳಿಂದ ಕಂಗೊಳಿಸುತ್ತಿತ್ತು. ಹೊರಗೆ ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದ ದೇವಾಲಯ ಕಣ್ಮನ ಸೆಳೆಯುತ್ತಿತ್ತು.

ನಗರದ ಕರಿವರದರಾಜನ ಬೆಟ್ಟ, ಕಾಡು ನಾರಾಯಣಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಇಂದು ವಿಷ್ಣು ದೀಪೋತ್ಸವ ಜರುಗಿತು. ಭಕ್ತರು ಉತ್ಸವದಲ್ಲಿ ಭಾಗವಹಿಸಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.