ADVERTISEMENT

ಯಳಂದೂರು: ಲೋಕಾಯುಕ್ತ ಡಿವೈಎಸ್ಪಿಗೆ 12 ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 16:02 IST
Last Updated 14 ಆಗಸ್ಟ್ 2024, 16:02 IST
ಯಳಂದೂರು ಪಟ್ಟಣದ ತಾಲ್ಲೂಕು ಕಚೇರಿಯ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಕುಂದು ಕೊರತೆ ದೂರು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮ್ಯಾಥೀವ್ ಥಾಮಸ್ ಮಾತನಾಡಿದರು.
ಯಳಂದೂರು ಪಟ್ಟಣದ ತಾಲ್ಲೂಕು ಕಚೇರಿಯ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಕುಂದು ಕೊರತೆ ದೂರು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮ್ಯಾಥೀವ್ ಥಾಮಸ್ ಮಾತನಾಡಿದರು.   

ಯಳಂದೂರು: ಪಟ್ಟಣದಲ್ಲಿ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಅಹವಾಲು ಅರ್ಜಿ ಸ್ವೀಕರಿಸಿದರು.

ಸಮಸ್ಯೆಗಳಿದ್ದರೆ ಸಾರ್ವಜನಿಕರು ದೂರು ಸಲ್ಲಿಸಬಹುದು. ಪರಿಹರಿಸಲು ಕ್ರಮವಹಿಸಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಮ್ಯಾಥೀವ್ ಥಾಮಸ್ ಹೇಳಿದರು.  ಸಾರ್ವಜನಿಕರಿಂದ 12 ಅರ್ಜಿಗಳನ್ನು ಸ್ವೀಕರಿಸಿದರು.

ಎಎಸ್ಐ ಮಹದೇವಪ್ಪ, ಲೋಕಾಯುಕ್ತ ಸಬ್‌ಇನ್‌ಸ್ಪೆಕಟರ್‌ ಲೋಹಿತ್ ಕುಮಾರ್ ಶಶಿಕುಮಾರ್, ಅಧಿಕಾರಿಗಳಾದ ಇಒ ಆರ್.ಉಮೇಶ್, ಸಿಡಿಪಿಒ ಸಕಲೇಶ್ವರ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೇಶವಮೂರ್ತಿ, ಕೃಷಿ ಇಲಾಖೆಯ ಅಮೃತೇಶ್ವರ, ಪ. ಪಂ. ಸದಸ್ಯ ಮಹೇಶ್ ಹಾಗೂ ತೋಟಗಾರಿಕಾ ಇಲಾಖೆ ಶಿವರಂಜನಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.