ADVERTISEMENT

ಗೌರಿಬಿದನೂರು: ಕಣದಲ್ಲಿ 13 ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 8:37 IST
Last Updated 29 ಏಪ್ರಿಲ್ 2018, 8:37 IST

ಗೌರಿಬಿದನೂರು: ವಿಧಾನಸಭೆ ಚುನಾವಣೆಗೆ ಕ್ರಮಬದ್ಧ ಉಮೇದು ವಾರಿಕೆ ಸಲ್ಲಿಸಿದ್ದ 15 ಅಭ್ಯರ್ಥಿಗಳ ಪೈಕಿ ನಾಮಪತ್ರ ಹಿಂಪಡೆಯುವ ಕೊನೆಯ ದಿನ ಪಕ್ಷೇತರ ಅಭ್ಯರ್ಥಿಗಳಾದ ಮೀರ್ ಗುಲಾಂ ಆಸ್ಕರಿ, ಎನ್.ಆರ್.ವಿಜಯಕುಮಾರ್ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, 13 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.

ಕೆ.ಜೈಪಾಲ್‌ ರೆಡ್ಡಿ (ಬಿಜೆಪಿ), ಸಿ.ಆರ್.ನರಸಿಂಹಮೂರ್ತಿ (ಜೆಡಿಎಸ್), ಎನ್.ಆರ್.ರವಿಚಂದ್ರರೆಡ್ಡಿ (ಸಿಪಿಎಂ), ಎನ್.ಎಚ್.ಶಿವಶಂಕರರೆಡ್ಡಿ (ಕಾಂಗ್ರೆಸ್), ಎಂ.ಜಿ.ಅನಂತಕುಮಾರ್ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ಖಾದರ್ ಸುಭಾನ್ ಖಾನ್ (ಸಮಾಜವಾದಿ ಪಕ್ಷ), ಬಿ.ಎ.ದೇವಕಿ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಎಚ್.ವಿ.ಯೋಗೀಶ್ (ಎಐಎಂಇಪಿ), ವಿ.ಸಿ.ಸಚ್ಚಿದಾನಂದಮೂರ್ತಿ (ಭಾರತೀಯ ಜನಶಕ್ತಿ ಕಾಂಗ್ರೆಸ್), ಪಕ್ಷೇತರರಾಗಿ ಅಮ್ಜದ್ ಖಾನ್ ಜಿ.ಆರ್.ಮೋಹನ್ ಕುಮಾರ್, ಜಿ.ಎನ್.ರವಿ, ಎನ್. ಹನುಮಂತಪ್ಪ ಚುನಾವಣೆ ಅಂತಿಮ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT