ADVERTISEMENT

ಚಿಂತಾಮಣಿ ಹೊರವಲಯದ ಕನಂಪಲ್ಲಿ ಕೆರೆ: ಬಾಡೂಟಕ್ಕೆ ಬಂದು ನೀರು ಪಾಲಾದ ಯುವಕ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 13:37 IST
Last Updated 24 ಅಕ್ಟೋಬರ್ 2017, 13:37 IST
ಕೆರೆಯಲ್ಲಿ ಈಜಾಡುವ ಮುನ್ನ ಸುನೀಲ್‌ ತನ್ನ ಮೊಬೈಲ್‌ನಲ್ಲಿ ತೆಗೆದುಕೊಂಡ ಸೆಲ್ಫಿ ಚಿತ್ರವಿದು.
ಕೆರೆಯಲ್ಲಿ ಈಜಾಡುವ ಮುನ್ನ ಸುನೀಲ್‌ ತನ್ನ ಮೊಬೈಲ್‌ನಲ್ಲಿ ತೆಗೆದುಕೊಂಡ ಸೆಲ್ಫಿ ಚಿತ್ರವಿದು.   

ಚಿಕ್ಕಬಳ್ಳಾಪುರ: ಚಿಂತಾಮಣಿ ಹೊರವಲಯದ ಕನಂಪಲ್ಲಿ ಕೆರೆ ಬಳಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರು ಮಂಗಳವಾರ ಏರ್ಪಡಿಸಿದ್ದ ‘ವನಮಹೋತ್ಸವ’ ಬಾಡೂಟಕ್ಕೆ ಬಂದಿದ್ದ ಯುವಕನೊಬ್ಬ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾನೆ.

ಚಿಂತಾಮಣಿಯ ಬೊಂಬು ಬಜಾರ್‌ ನಿವಾಸಿ ಸುನೀಲ್‌ (22) ಮೃತಪಟ್ಟ ಯುವಕ. ಸುನೀಲ್ ಜತೆಯಲ್ಲೇ ಕೆರೆಗೆ ಇಳಿದಿದ್ದ ಇಬ್ಬರು ಯುವಕರು ಗಾಬರಿಯಿಂದ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸುನೀಲ್‌ನ ಮೃತದೇಹವನ್ನು ಹೊರಕ್ಕೆ ತೆಗೆದರು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.