ADVERTISEMENT

ಗೌರಿಬಿದನೂರು: ನಿರೀಕ್ಷಣಾ ಮಂದಿರದ ಮರ ಕಡಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:34 IST
Last Updated 16 ಜೂನ್ 2025, 14:34 IST
ಗೌರಿಬಿದನೂರು ನಗರದ ನಿರೀಕ್ಷಣ ಮಂದಿರ ಆವರಣದಲ್ಲಿ ಮರ ಕಡಿಯಲಾಗಿದೆ
ಗೌರಿಬಿದನೂರು ನಗರದ ನಿರೀಕ್ಷಣ ಮಂದಿರ ಆವರಣದಲ್ಲಿ ಮರ ಕಡಿಯಲಾಗಿದೆ   

ಗೌರಿಬಿದನೂರು: ನಗರದ ನಿರೀಕ್ಷಣಾ ಮಂದಿರದ ಆವರಣದಲ್ಲಿ ಬೃಹದಾಕಾರವಾಗಿ ಬೆಳೆದಿದ್ದ ಮರವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆ ಅನುಮತಿ ಪಡೆಯದೆ ಕಡಿಸಿದ್ದಾರೆ ಎಂದು ರೈತ ಸಂಘ ದೂರಿದೆ.

ಸುಮಾರು 20 ರಿಂದ 25 ವರ್ಷಗಳಿಂದ ಬೆಳೆದಿದ್ದ ಪೆಲ್ಟೊ ಫಾರ್ಮ್ ಮರವನ್ನು ಕಡಿಯಲಾಗಿದೆ. ಪಕ್ಕದಲ್ಲೇ ಇರುವ ಬೇವಿನ ಮರದ ಕೊಂಬೆಗಳನ್ನು ಕತ್ತರಿಸಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಆರೋಪಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಆವರಣದಲ್ಲಿರುವ ನೀಲಗಿರಿ ಮರಗಳನ್ನು ಕಡಿಯಲು ಟೆಂಡರ್ ಆಗಿದ್ದರೆ, ಇಲ್ಲಿನ ಅಧಿಕಾರಿಗಳು ಪಕ್ಕದ ನಿರೀಕ್ಷಣ ಮಂದಿರದ ಅವರಣದಲ್ಲಿರುವ ಮರವನ್ನು ಕಡಿದು ಹಾಕಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮರ ಕಡಿಯುವವರತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಇಲ್ಲಿನ ಮರ ಕಡಿಯಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.