ADVERTISEMENT

ಉತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 3:18 IST
Last Updated 24 ನವೆಂಬರ್ 2020, 3:18 IST
ಎ.ವಿ.ನಾಗಾರ್ಜುನ
ಎ.ವಿ.ನಾಗಾರ್ಜುನ   

ಚಿಂತಾಮಣಿ: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರವು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಬಿ.ಕಾಂ ಪದವಿಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ ಎಂದು ಪ್ರಾಂಶುಪಾಲೆ ಪ್ರೊ.ಕೆ. ಶಾರದಾ ತಿಳಿಸಿದ್ದಾರೆ.

ನಾಲ್ವರು ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 70 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ಜನ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎ.ವಿ. ನಾಗಾರ್ಜುನ 638 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಾಸ್ಟ್‌ ಮ್ಯಾನೇಜ್‌ಮೆಂಟ್ ವಿಷಯದಲ್ಲಿ 100ಕ್ಕೆ 100, ಬಿ.ಟಿ. ವಿಷಯದಲ್ಲಿ 98, ಬ್ಯಾಂಕಿಂಗ್ ರೆಗ್ಯುಲೇಷನ್ಸ್ ನಲ್ಲಿ 96, ಅಕೌಂಟಿಂಗ್‌‌ನಲ್ಲಿ 95 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾನೆ. ಟಿ.ಎನ್. ನಾಗೇಂದ್ರ 627 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸಿ.ಎಂ 98, ಬಿ.ಟಿ 98, ಬಿ.ಆರ್ 91, ಎಂ.ಎ 96, ಐ.ಟಿ 90 ಅಂಕಗಳನ್ನು ಗಳಿಸಿದ್ದಾನೆ. ಎ.ಮೋಹನ್ ರಾಜ್ 621 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಸಿ.ಎಂ. 98, ಬಿ.ಟಿ 98, ಬಿ.ಆರ್ 92, ಐ.ಟಿ 85, ಪಿ.ಪಿ.ಎ 88 ಅಂಕಗಳನ್ನು ಪಡೆದಿದ್ದಾನೆ. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು, ಪ್ರಾಂಶುಪಾಲೆ ಕೆ.ಶಾರದಾ ಅವರ ಮಾರ್ಗದರ್ಶನ,ಪ್ರೋತ್ಸಾಹ ಉತ್ತಮ ಸಾಧನೆಗೆ ಸಹಕಾರಿಯಾಯಿತು ಎಂದು ವಿದ್ಯಾರ್ಥಿಗಳಾದ ಎ.ವಿ.ನಾಗೇಂದ್ರ, ಮೋಹನ್ ರಾಜ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.