ADVERTISEMENT

ಚಿಕ್ಕಬಳ್ಳಾಪುರ: ಭೂ ಮಾಪಕರ ನೇಮಿಸಲು ಒತ್ತಾಯ

ಕಂದಾಯ ಇಲಾಖೆಯಲ್ಲಿ ಸಮಸ್ಯೆ; ಸಚಿವ ಆರ್‌.ಅಶೋಕ್‌ಗೆ ರೈತ ಸಂಘದ ನಿಯೋಗ ಮನವಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 8:07 IST
Last Updated 9 ಅಕ್ಟೋಬರ್ 2021, 8:07 IST
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ರೈತ ಸಂಘದ ಸದಸ್ಯರು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಸಲ್ಲಿಸಿದರು. ಭಕ್ತರಹಳ್ಳಿ ಪ್ರತೀಶ್, ಭೀಮಣ್ಣ, ವಿ.ಮುನಿಯಪ್ಪ, ಕೆ.ಎನ್.ಮುಂಜುನಾಥ್, ಸಿ.ಎಸ್.ವೆಂಕಟೇಶ್, ಎಚ್‌.ಎನ್.ಕದಿರೇಗೌಡ, ಬಿ.ಕೆ.ಮುನಿಕೆಂಪಣ್ಣ ನಿಯೋಗದಲ್ಲಿ ಇದ್ದರು
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ರೈತ ಸಂಘದ ಸದಸ್ಯರು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಸಲ್ಲಿಸಿದರು. ಭಕ್ತರಹಳ್ಳಿ ಪ್ರತೀಶ್, ಭೀಮಣ್ಣ, ವಿ.ಮುನಿಯಪ್ಪ, ಕೆ.ಎನ್.ಮುಂಜುನಾಥ್, ಸಿ.ಎಸ್.ವೆಂಕಟೇಶ್, ಎಚ್‌.ಎನ್.ಕದಿರೇಗೌಡ, ಬಿ.ಕೆ.ಮುನಿಕೆಂಪಣ್ಣ ನಿಯೋಗದಲ್ಲಿ ಇದ್ದರು   

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ, ಚಿಂತಾಮಣಿ ಭೂಮಾಪನ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ರೈತರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು ಭೂಮಾಪಕರ ನೇಮಕ ಮಾಡಬೇಕು. ಪೋಡಿ ಮುಕ್ತ ಆಂದೋಲನದಲ್ಲಿ ಕೈಬಿಟ್ಟು ಹೋಗಿರುವ ರೈತರ ಜಮೀನುಗಳನ್ನು ಉಚಿತವಾಗಿ ಪೋಡಿ ಮಾಡಲು ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ (ಸಾಮೂಹಿಕ ನಾಯಕತ್ವ)ದ ಜಿಲ್ಲಾ ಘಟಕದ ಪದಾಧಿಕಾರಿಗಳು ಕಂದಯ ಸಚಿವ ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕು ಕಚೇರಿಯಲ್ಲಿ ಐದಾರು ವರ್ಷಗಳಿಂದ ಒಂದೇ ಕಡೆ ಕೆಲವು ಮಾಡುತ್ತಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಪಿ ನಂಬರ್ ಜಮೀನುಗಳನ್ನು ದುರಸ್ತಿ ಮಾಡಿಕೊಡಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭೂಮಾಪನ ಇಲಾಖೆಯಲ್ಲಿ ರೈತರು ಅಳತೆ ಹದ್ದುಬಸ್ತು ಪೋಡಿ ಇ–ಸ್ವತ್ತಿಗಾಗಿ ಅರ್ಜಿಗಳನ್ನು ನೀಡಿದ್ದಾರೆ. ಸುಮಾರು ಎರಡು ವರ್ಷಗಳಿಂದ ಈ ಅರ್ಜಿಗಳು ಬಾಕಿ ಇದ್ದು ಸಕಾಲದಲ್ಲಿ ವಿಲೇವಾರಿ ಮಾಡಲು ಕ್ರಮವಹಿಸಬೇಕು.

20 ವರ್ಷಗಳಿಂದ ಉಳುಮೆ ಮಾಡಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹೊಸದಾಗಿ ಅರ್ಜಿ ಹಾಕಲು ಫಾರಂ ನಂ.53, 57ರ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಸಲ್ಲಿಸಬೇಕು. ಈಗಾಗಲೇ ಮಂಜೂರಾಗಿರುವ ಸಾಗುವಳಿ ಚೀಟಿಗಳನ್ನು ವಿತರಿಸಿ ಖಾತೆ, ಪಹಣಿ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.