ADVERTISEMENT

ಮುಗುಳುವಳ್ಳಿ: ಎಚ್‌ಡಿಕೆ ಗ್ರಾಮ ವಾಸ್ತವ್ಯ ಇಂದು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:17 IST
Last Updated 7 ನವೆಂಬರ್ 2017, 6:17 IST
ಎಚ್.ಡಿ.ಕುಮಾರಸ್ವಾಮಿ ಅವರ ವಾಸ್ತವ್ಯಕ್ಕೆ ಮುಗುಳವಳ್ಳಿಯ ಧರ್ಮಪಾಲ ಅವರ ಮನೆಯಲ್ಲಿ ಸೋಮವಾರ ಸಿದ್ಧತೆಗಳು ನಡೆದವು. ಮುಖಂಡರಾದ ಎಂ.ಡಿ.ರಮೇಶ್, ಹೊಲಗದ್ದೆ ಗಿರೀಶ್, ಜಯರಾಜ್ ಅರಸ್, ದೇವಿಪ್ರಸಾದ್ ಅವರು ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರ ವಾಸ್ತವ್ಯಕ್ಕೆ ಮುಗುಳವಳ್ಳಿಯ ಧರ್ಮಪಾಲ ಅವರ ಮನೆಯಲ್ಲಿ ಸೋಮವಾರ ಸಿದ್ಧತೆಗಳು ನಡೆದವು. ಮುಖಂಡರಾದ ಎಂ.ಡಿ.ರಮೇಶ್, ಹೊಲಗದ್ದೆ ಗಿರೀಶ್, ಜಯರಾಜ್ ಅರಸ್, ದೇವಿಪ್ರಸಾದ್ ಅವರು ವ್ಯವಸ್ಥೆಗಳನ್ನು ಪರಿಶೀಲಿಸಿದರು.   

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಗುಳುವಳ್ಳಿಯಲ್ಲಿ ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇದೇ 7ರಂದು ಗ್ರಾಮವಾಸ್ತವ್ಯ ಹೂಡಲಿದ್ದಾರೆ.

ಕುಮಾರಸ್ವಾಮಿ ಅವರು ಸಂಜೆ 6.30ಕ್ಕೆ ನಗರದ ಆಜಾದ್‌ ಪಾಕ್‌ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುವರು. ಈ ಕಾರ್ಯಕ್ರಮದ ನಂತರ ಅವರು ಚಿಕ್ಕಮಗಳೂರು ತಾಲ್ಲೂಕಿನ ಮುಗುಳವಳ್ಳಿ ಗ್ರಾಮಕ್ಕೆ ತೆರಳುವರು. ಅಲ್ಲಿ ಸಭೆ ನಡೆಸಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವರು. ದಲಿತ ಧರ್ಮಪಾಲ ಅವರ ಮನೆಯಲ್ಲಿ ವಾಸ್ತವ್ಯ ಹೂಡುವರು ಎಂದು ಜೆಡಿಎಸ್‌ ಪ್ರಕಟಣೆ ತಿಳಿಸಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗ್ರಾಮ ವಾಸ್ತವ್ಯ ಇಂದು

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಅವರು ಮೂಡಿಗೆರೆ ತಾಲ್ಲೂಕಿನ ಕಳಸ ಹೋಬಳಿ, ಜೋಗಿಕುಂಬ್ರಿ ಗ್ರಾಮದಲ್ಲಿ ಇದೇ 7ರಂದು ಗ್ರಾಮ ವಾಸ್ತವ್ಯ ಹೂಡುವರು. ಜನಸಂಪರ್ಕ ಸಭೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.