ADVERTISEMENT

ಲೋಕಾಯುಕ್ತ ಬಲೆಗೆ ಬಿಇಒ ಕಚೇರಿ ಗುಮಾಸ್ತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 10:40 IST
Last Updated 18 ಫೆಬ್ರುವರಿ 2011, 10:40 IST

ಚಿಕ್ಕಮಗಳೂರು: ಲೋಕಾಯುಕ್ತ ಬಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗುಮಾಸ್ತ ಗುರುವಾರ ಸಿಕ್ಕಿಬಿದ್ದಿದ್ದಾರೆ.ಕನ್ನಡ ಮಾಧ್ಯಮದಲ್ಲಿ ಉತ್ತೀರ್ಣರಾದ ಶಿಕ್ಷಕರಿಗೆಸರ್ಕಾರ ನೀಡುವ ಅನುದಾನದ ಕಡತ ಸಿದ್ಧಪಡಿಸಲು ಎಫ್‌ಡಿಎ ಬಾಲಕೃಷ್ಣ ಅವರು ನಿವೃತ್ತ ಶಿಕ್ಷಕಿ ಚಿಕ್ಕಮ ಗಳೂರು ನಗರದ ಶಾಂತಕುಮಾರಿ ಅವರಿಂದ ಮೂರು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದರು.

ಶಾಂತಕುಮಾರಿ ಅವರು ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿಗೆ ಅರ್ಜಿ ನೀಡಿ ಸುಮಾರು ನಾಲ್ಕೈದು ತಿಂಗಳುಗಳಾಗಿದ್ದವು. ಕಡತ ಸಿದ್ಧಪಡಿಸಲು ಹಣಕ್ಕೆಒತ್ತಾಯಿಸಿದ್ದರಿಂದ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.ಹಾಸನ ಲೋಕಾಯುಕ್ತ ಡಿವೈಎಸ್‌ಪಿ ರಾಮನಾಯಕ್ ಮತ್ತು ಇನ್ಸ್‌ಪೆಕ್ಟರ್ ಗುರುರಾಜು ಮತ್ತು ಸಿಬ್ಬಂದಿ ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.