ಚಿಕ್ಕಮಗಳೂರು: ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಪಿಎಸ್ಐಗೆ ಬೆದರಿಕೆ ಹಾಕಿರುವ ಫೋನ್ ಸಂಭಾಷಣೆಯ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ವಿಚಾರವು ಜಾತಿ ಲೇಪನ ಪಡೆದು ಫೇಸ್ಬುಕ್ನಲ್ಲಿ ಜಟಾಪಟಿಗೆ ಎಡೆಮಾಡಿದೆ.
ತಾಲ್ಲೂಕಿನ ಮಲ್ಲಂದೂರು ಠಾಣೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಬಂದ ಪಿಎಸ್ಐ ರವೀಶ್ ಅವರಿಗೆ ಶಾಸಕರು ಫೋನ್ ಮಾಡಿ ವಾಪಸ್ ಹೋಗಲು ಬೆದರಿಕೆ ಹಾಕಿರುವ ಸಂಭಾಷಣೆ ಆಡಿಯೊ ಕ್ಲಿಪ್ನಲ್ಲಿದೆ.
‘ಹಕ್ಕುಚ್ಯುತಿ ಮಂಡಿಸುವೆ: ಪಿಎಸ್ಐಗೆ ಬೆದರಿಕೆ ಹಾಕಿದ್ದು ನಿಜ ಎಂದು ಒಪ್ಪಿಕೊಂಡಿರುವ ಶಾಸಕರು, ‘ಫೋನ್ ಸಂಭಾ
ಷಣೆ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ. ಈ ಬಗ್ಗೆ ಹಕ್ಕುಚ್ಯುತಿ ಮಂಡಿಸುತ್ತೇನೆ’ ಎಂದು ಹೇಳಿದರು.ವಿವರ
ವಾದ ಸುದ್ದಿಗೆ ಲಿಂಕ್ಗಳಿಗೆಸಂಪರ್ಕಿಸಿ: https://bit.ly/3LRooQ1 ಮತ್ತುhttps://bit.ly/3kNZp4m
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.