ADVERTISEMENT

ಕೊಟ್ಟಿಗೆಹಾರ | ತರುವೆ: ಖಾಯಂ ಪಿಡಿಒ ನೇಮಕಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 12:45 IST
Last Updated 19 ಸೆಪ್ಟೆಂಬರ್ 2024, 12:45 IST
ಪ್ರಭಾಕರ್ ಬಿನ್ನಡಿ
ಪ್ರಭಾಕರ್ ಬಿನ್ನಡಿ   

ಕೊಟ್ಟಿಗೆಹಾರ: ಇಲ್ಲಿನ ತರುವೆ ಗ್ರಾಮ ಪಂಚಾಯಿತಿಯಲ್ಲಿ ಖಾಯಂ ಪಿಡಿಒ ಇಲ್ಲದೇ ವರ್ಷಗಳು ಕಳೆದಿದ್ದು ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಭಾಕರ್ ಬಿನ್ನಡಿ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ತರುವೆ ಗ್ರಾಮ ಪಂಚಾಯಿತಿಯಲ್ಲಿ ಖಾಯಂ ಪಿಡಿಒ ಇಲ್ಲದೆ ಅತ್ತಿಗೆರೆ, ಬಿನ್ನಡಿ, ದೇವನಗೂಲ್, ಅಜಾದ್ ನಗರ, ರಾಮನಗರ ಮತ್ತಿತರ ಗ್ರಾಮದ ಕೆಲಸಗಳು ಆಗುತ್ತಿಲ್ಲ. ಇಲ್ಲಿದ್ದ ಪಿಡಿಒ ವರ್ಷದ ಹಿಂದೆ ವರ್ಗ ಆಗಿರುವುದರಿಂದ ಬೇರೆ ಪಂಚಾಯಿತಿಗಳ ಪಿಡಿಒ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗಿದೆ. ಅವರಿಗೆ ಎರಡೆರಡು ಗ್ರಾಮ ಪಂಚಾಯಿತಿ ಕೆಲಸ ನಿಭಾಯಿಸುವುದು ಕಷ್ಟವಾಗಿದೆ. ಸಂಬಂಧಪಟ್ಟವರು ತರುವೆ ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಒ ನೇಮಕ ಮಾಡದೇ ಇದ್ದರೆ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT