ADVERTISEMENT

ಚಿಕ್ಕಮಗಳೂರು: ಡಿಎಚ್‌ಒ ಪ್ರಭು ಅಮಾನತು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:26 IST
Last Updated 2 ಮಾರ್ಚ್ 2020, 19:26 IST

ಚಿಕ್ಕಮಗಳೂರು: ಮಿಡ್ಲ್‌ ಲೆವಲ್‌ ಹೆಲ್ತ್‌ ಪ್ರವೈಡರ್ಸ್‌ ನೇಮಕಾತಿ ಕೌನ್ಸೆಲಿಂಗ್‌ ಲೋಪ ಪ್ರಕರಣದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಪ್ರಭು ಅವರನ್ನು ಅಮಾನತು ಮಾಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಈ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ನೇಮಕಾತಿ ಕೌನ್ಸೆಲಿಂಗ್‌ ನಡೆದಿತ್ತು. ಕೌನ್ಸೆಲಿಂಗ್‌ನಲ್ಲಿ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಈ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಆರ್‌ಸಿಎಚ್‌ ಅಧಿಕಾರಿ ಡಾ.ಭರತ್‌ ಅವರಿಗೆ ಪ್ರಭಾರ ಡಿಎಚ್‌ಒ ಹೊಣೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.