ADVERTISEMENT

ಅಂಗವಿಕಲ ಪುತ್ರ, ಅಪಘಾತದಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ತಂದೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 6:27 IST
Last Updated 17 ನವೆಂಬರ್ 2022, 6:27 IST
ಕೈಕಾಲು ಸ್ವಾಧೀನ ಕಳೆದುಕೊಂಡ ಪುತ್ರ ನಿರಂಜನ್ ಜತೆಗೆ ಮಂಜುನಾಥ್, ನಾಗರತ್ನ ದಂಪತಿ.
ಕೈಕಾಲು ಸ್ವಾಧೀನ ಕಳೆದುಕೊಂಡ ಪುತ್ರ ನಿರಂಜನ್ ಜತೆಗೆ ಮಂಜುನಾಥ್, ನಾಗರತ್ನ ದಂಪತಿ.   

ಕೊಪ್ಪ: ತಾಲ್ಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ದಿಟ್ಟೆಕೊಪ್ಪ ಸಮೀಪದ ದೋಣಿಹಡ್ಲು ನಿವಾಸಿ ಮಂಜುನಾಥ್ ಅವರ 9 ವರ್ಷದ ಪುತ್ರ ಡಿ.ಎಂ.ನಿರಂಜನ್ ಅಂಗವಿಕಲನಾಗಿದ್ದು, ಕುಟುಂಬವು ಸಹಾಯ ಯಾಚಿಸಿದೆ.

ನಿರಂಜನ್ ಕೈ ಕಾಲು ಸ್ವಾಧೀನ ಕಳೆದುಕೊಂಡು ಹಾಸಿಗೆಯಲ್ಲಿದ್ದಾನೆ. ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹಜ ಸ್ಥಿತಿಗೆ ಬಂದಿಲ್ಲ. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಮಂಜುನಾಥ್ ಅಪಘಾತದಿಂದ ಅವರ ಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕುಟುಂಬ ಸಮಸ್ಯೆ ಎದುರಿಸುತ್ತಿದೆ.

‘ಪುತ್ರ ನಿರಂಜನ್ ಗೆ ಚಿಕಿತ್ಸೆ ಕೊಡಿಸಬೇಕಾಗಿದೆ. ಅಂಗವಿಕಲ ವೇತನ ಸರಿಯಾಗಿ ಸಿಗುತ್ತಿಲ್ಲ’ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ. ಮಂಜುನಾಥ್ ಅವರನ್ನು 7483500801 ಮೂಲಕ ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.