ಚಿಕ್ಕಮಗಳೂರು: ಯಶವಂತಪುರ–ಶಿವಮೊಗ್ಗ– ಯಶವಂತಪುರ (ಗಾಡಿ ಸಂಖ್ಯೆ12089/12090) ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ಇದೇ 15ರಿಂದ ಜಿಲ್ಲೆಯ ತರೀಕೆರೆ ತಾಲ್ಲೂಕು ಕೇಂದ್ರದಲ್ಲಿ ಒಂದು ನಿಮಿಷ ನಿಲುಗಡೆ ಕಲ್ಪಿಸಲಾಗಿದೆ.
ಪ್ರಾಯೋಗಿಕವಾಗಿ ಇದೇ 15ರಿಂದ ಜುಲೈ 14ರವರೆಗೆ ಆರು ತಿಂಗಳು ಈ ಸೌಲಭ್ಯ ಕಲ್ಪಿಸಲಾಗಿದೆ.
ಯಶವಂತಪುರ –ಶಿವಮೊಗ್ಗ (12089) ರೈಲು ರಾತ್ರಿ 9.02ಕ್ಕೆ ತರೀಕೆರೆ ನಿಲ್ದಾಣ ತಲುಪಿ 9.03ಕ್ಕೆ ಹೊರಡಲಿದೆ.
ಶಿವಮೊಗ್ಗ–ಯಶವಂತಪುರ (12090) ರೈಲು ಬೆಳಿಗ್ಗೆ 6.04ಕ್ಕೆ ತರೀಕೆರೆ ನಿಲ್ದಾಣ ತಲುಪಿ 6.05ಕ್ಕೆ ಹೊರಡಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.