ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಶುಕ್ರವಾರ ಗುಡುಗುಸಹಿತ ಮಳೆಯಾಗಿದ್ದು, ಮಲೆನಾಡು ಭಾಗದ ಕೆಲವೆಡೆ ಒಣ ಹಾಕಿದ್ದ ಕಾಫಿ ತೊಯ್ದಿದೆ.
ತಡರಾತ್ರಿಯಿಂದ ಶುರುವಾದ ಮಳೆ ಬಿಟ್ಟುಬಿಟ್ಟು ಸುರಿದಿದೆ. ಎಲ್ಲ ತಾಲ್ಲೂಕುಗಳಲ್ಲಿ ಮಳೆಯಾಗಿದೆ.
ನಗರ, ಗಿರಿ ಶ್ರೇಣಿ , ಸುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ. ನಸುಕಿನಲ್ಲಿ ಸುಮಾರು ಮುಕ್ಕಾಲು ಗಂಟೆ ಸಾಧಾರಣವಾಗಿ ಸುರಿದಿದೆಇ.
ಸಿಂಗಟಿಗೆರೆ– 4.6, ಬಸ್ರಿಕಟ್ಟೆ– 3.6, ಹುಣಸಘಟ್ಟ– 2.2, ಬಾಳೆಹೊನ್ನೂರು, ಬುಕ್ಕಾಂಬೂದಿ– 2, ಅತ್ತಿಗುಂಡಿ– 1.6, ಮೂಡಿಗೆರೆ– 1.2, ಅಜ್ಜಂಪುರ– 1.1 ಮಳೆಯಾಗಿದೆ.
ಮಳೆ ಮುನ್ಸೂಚನೆ: ಇದೇ 22ರವರೆಗೆ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಗಾಳಿಯ ವೇಗವು ಹೆಚ್ಚು ಇರುವ ಸಂಭವ ಇದೆ ಎಂದು ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ವಿಜ್ಞಾನಿ ಪ್ರವೀಣ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.